Select Your Language

Notifications

webdunia
webdunia
webdunia
webdunia

ಸುಮಲತಾ ಪರ ನಿಂತ ನಟರ ಬಗ್ಗೆ ವ್ಯಂಗ್ಯವಾಡಿದ ಸಿಎಂ ಕುಮಾರಸ್ವಾಮಿ

ಸುಮಲತಾ ಪರ ನಿಂತ ನಟರ ಬಗ್ಗೆ ವ್ಯಂಗ್ಯವಾಡಿದ ಸಿಎಂ ಕುಮಾರಸ್ವಾಮಿ
ಮಂಡ್ಯ , ಬುಧವಾರ, 3 ಏಪ್ರಿಲ್ 2019 (15:04 IST)
ಮಂಡ್ಯ : ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ನಟ ದರ್ಶನ್ ಹಾಗೂ ಯಶ್ ಅಬ್ಬರದ ಪ್ರಚಾರ ನಡೆಸುತ್ತಿರುವ ಹಿನ್ನಲೆಯಲ್ಲಿ ಇದೀಗ ಸಿಎಂ ಕುಮಾರಸ್ವಾಮಿ ನಟರ ಬಗ್ಗೆ ವ್ಯಂಗ್ಯವಾಡಿದ್ದಾರೆ.


ಸುಮಲತಾ ಅಂಬರೀಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿನ್ನೆ 20 ಕ್ಕೂ ಹೆಚ್ಚು ಕಡೆ ರೋಡ್ ಶೋ ನಡೆಸಿ ಸುಮಲತಾ ಪರ ಮತ ಯಾಚಿಸಿದ್ದರು. ಇಂದು ಕೂಡ ಪ್ರಚಾರ ಆರಂಭಿಸಲಿರುವ ದರ್ಶನ್ ಸುಮಾರು 35 ಕ್ಕೂ ಹೆಚ್ಚು ಕಡೆ ಪ್ರಚಾರ ನಡೆಸಲು ತಯಾರಿ ನಡೆಸಿದ್ದು ಇದಕ್ಕೆ  ರಾಕಿಂಗ್ ಸ್ಟಾರ್ ಯಶ್ ಕೂಡಾ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ.


ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಬಿಸಿಲಲ್ಲಿ ಓಡಾಡಲಿ ಬಿಡಿ, ಕಷ್ಟ ಏನು ಎನ್ನುವುದು ಗೊತ್ತಾಗುತ್ತದೆ. ಇಷ್ಟು ದಿನ ಛತ್ರಿಯ ಕೆಳಗೆ ಸಿನಿಮಾ ಚಿತ್ರೀಕರಣದಲ್ಲಿ ಇರುತ್ತಿದ್ದರು. ಪ್ರಚಾರದ ವೇಳೆ ಬಿಸಿಲಲ್ಲಿ ಸುತ್ತುವುದರಿಂದ ಜಿಲ್ಲೆಯ ರೈತರ ಕಷ್ಟ ಅವರಿಗೆ ಅರ್ಥವಾಗುತ್ತದೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ನಾಯಕರಿಂದ ಕೀಳುಮಟ್ಟದ ರಾಜಕಾರಣ ನಡೆಸಲಾಗುತ್ತಿದೆ – ಸಿಎಂ ಕುಮಾರಸ್ವಾಮಿ ವಾಗ್ದಾಳಿ