Select Your Language

Notifications

webdunia
webdunia
webdunia
Friday, 11 April 2025
webdunia

ಬಿಜೆಪಿ ಹಣಿಯಲು ಒಂದಾಗಿ ಎಂದ ಖರ್ಗೆ

ಬಿಜೆಪಿ
ಬೆಂಗಳೂರು , ಭಾನುವಾರ, 7 ಅಕ್ಟೋಬರ್ 2018 (19:04 IST)
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ದೂರ ಇಡುವುದಕ್ಕಾಗಿ ಎಲ್ಲ ಪಕ್ಷಗಳು ಒಂದಾಗಬೇಕಿವೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಹೇಳಿದ್ದಾರೆ.

ಮಧ್ಯಪ್ರದೇಶ ಹಾಗೂ ರಾಜಸ್ಥಾನ ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆ ಮಾಯಾವತಿ ಹಾಗೂ ಎಸ್ ಪಿ ನಾಯಕ ಅಖಿಲೇಶ್ ಯಾದವ್ ಹೇಳಿಕೆ ನೀಡಿರುವ ಬೆನ್ನಲ್ಲೆ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.

ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ರಾಜಕೀಯ ಆಯಾಮ ಮತ್ತು ರಣತಂತ್ರಗಳು ಇರುತ್ತವೆ. ಸಮಾನ ಮನಸ್ಕರು ಒಂದಾಗಬೇಕು. ಸಮಾನ ಮನಸ್ಕರು ಒಂದಾಗುವ ತತ್ವದಲ್ಲಿ ನಾವು ನಂಬಿಕೆ ಇರಿಸಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ದೋಸ್ತಿ ಸರಕಾರಕ್ಕೆ ಬಿಜೆಪಿ ಸವಾಲು