Select Your Language

Notifications

webdunia
webdunia
webdunia
webdunia

ಕಮಲದ ಪರ ಪವನ್ ಕಲ್ಯಾಣ್​ ಪ್ರಚಾರ

ಕಮಲದ ಪರ ಪವನ್ ಕಲ್ಯಾಣ್​ ಪ್ರಚಾರ
bangalore , ಸೋಮವಾರ, 10 ಏಪ್ರಿಲ್ 2023 (16:30 IST)
ರಾಜ್ಯ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ರಣತಂತ್ರ ಹೆಣೆಯುತ್ತಿದೆ.. ಸೆಲೆಬ್ರಿಟಿಗಳನ್ನು ಕರೆತಂದು ಮತದಾರರ ಮನವೊಲಿಯುವಂತೆ ಮಾಡುತ್ತಿದೆ. ನಟ ಕಿಚ್ಚ ಸುದೀಪ್​ ಬಿಜೆಪಿಗೆ ಬೆಂಬಲ ಘೋಷಿಸಿದ ಬೆನ್ನಲ್ಲೇ ಮತ್ತೊಬ್ಬ ಪ್ಯಾನ್​ ಇಂಡಿಯ ಸ್ಟಾರ್​​ ಪವನ್​ ಕಲ್ಯಾಣ್​ರನ್ನು ಪ್ರಚಾರಕ್ಕೆ ಕರೆತರಲು ತೀರ್ಮಾನಿಸಿದೆ.. ಕರ್ನಾಟಕ ಗಡಿ ಜಿಲ್ಲೆಗಳಲ್ಲಿ ಪವನ್​ ಕಲ್ಯಾಣ್​ ತನ್ನದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.. ಕೋಲಾರ, ರಾಯಚೂರು, ಬಳ್ಳಾರಿ, ಚಿಕ್ಕಬಳ್ಳಾಪುರದಲ್ಲಿ ಪವನ್​ ಕಲ್ಯಾಣ್​ರನ್ನು ಪ್ರಚಾರಕ್ಕಿಳಿಸಲು ಬಿಜೆಪಿ ತೀರ್ಮಾನಿಸಿದೆ.. ಈ ಕುರಿತು ದೆಹಲಿಯಲ್ಲಿ BJP ರಾಷ್ಟ್ರೀಯ ಅಧ್ಯಕ್ಷ J.P. ನಡ್ಡಾ, ಪವನ್​ ಕಲ್ಯಾಣ್​ ಜೊತೆಗೆ ಮಾತುಕತೆ ನಡೆಸಿದ್ದಾರೆ.. ಇನ್ನೇನು ಕೆಲವೇ ದಿನಗಳಲ್ಲಿ ಕರುನಾಡಿನ ಗಡಿಭಾಗಗಳಲ್ಲಿ ಬಿಜೆಪಿ ಪರ ಪವನ್​ ಕಲ್ಯಾಣ್​​ ಭರ್ಜರಿ ಪ್ರಚಾರ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಲ್ಲೇಶ್ವರ ಬಿಜೆಪಿ ಕಚೇರಿಗೆ ಪೊಲೀಸ್​ ಭದ್ರತೆ