Select Your Language

Notifications

webdunia
webdunia
webdunia
webdunia

ಅಭ್ಯರ್ಥಿಗೆ ಹಣ ಕೊಟ್ಟ ಮತದಾರರು

ಅಭ್ಯರ್ಥಿಗೆ ಹಣ ಕೊಟ್ಟ ಮತದಾರರು
ಚಿತ್ರದುರ್ಗ , ಶುಕ್ರವಾರ, 28 ಏಪ್ರಿಲ್ 2023 (18:50 IST)
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್​​​ಗೆ ಜನರೇ ದುಡ್ಡು ಕೊಟ್ಟು ಪ್ರೋತ್ಸಾಹಿಸುತ್ತಿದ್ದಾರೆ. ಚಿತ್ರದುರ್ಗದ ಒನಕೆ ಓಬವ್ವ ಸ್ಟೇಡಿಯಂಗೆ ಮತಯಾಚನೆಗೆ ತೆರಳುತ್ತಿದ್ದ ವೇಳೆ ಕೆಫೆ ಒಂದರಲ್ಲಿ ಕಾಫಿ ಕುಡಿಯುತ್ತಿದ್ದರು. ಅದೇ ಕೆಫೆಯಲ್ಲಿ ಕಾಫಿ ಕುಡಿಯುತ್ತಿದ್ದ ಜನರು ಆತ್ಮೀಯವಾಗಿ ಮಾತನಾಡಿಸಿ, ಚಿತ್ರದುರ್ಗದಲ್ಲಿ ಕಮಿಷನ್ ದಂಧೆ ಹೆಚ್ಚಾಗಿದೆ, ಕಳಪೆ ಕಾಮಗಾರಿ ರಾರಾಜಿಸುತ್ತಿದೆ, ನೀವು ಎಂಎಲ್ ಸಿ ಆಗಿದ್ದಾಗ ಕಮಿಷನ್ ರಹಿತ ಸೇವೆ ಮಾಡಿದ್ದೀರಿ, ಹೀಗಾಗಿ ನಾವೇ ನಿಮಗೆ ದುಡ್ಡು ಕೊಟ್ಟು ಓಟನ್ನೂ ಕೊಡುತ್ತೇವೆ, ನಿಮ್ಮಂತವರು ಅಧಿಕಾರಕ್ಕೆ ಬರಬೇಕು ಎಂದು ಹೇಳಿ ಹಣ ಕೊಟ್ಟು ಪ್ರೋತ್ಸಾಹ ನೀಡಿದ್ದು, ಅಭ್ಯರ್ಥಿ ರಘು ಆಚಾರ್ ಗೆ ಆನೆ ಬಲ ಬಂದಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಅಂಗಾರಗೆ ಶಸ್ತ್ರ ಚಿಕಿತ್ಸೆ