Select Your Language

Notifications

webdunia
webdunia
webdunia
webdunia

ಚಿನ್ನಾಭರಣಕ್ಕಾಗಿ ಜಮೀನ್ದಾರನ ಭೀಕರ ಕೊಲೆ

ಚಿನ್ನಾಭರಣಕ್ಕಾಗಿ ಜಮೀನ್ದಾರನ ಭೀಕರ ಕೊಲೆ
ಬೆಂಗಳೂರು , ಶನಿವಾರ, 24 ನವೆಂಬರ್ 2018 (15:52 IST)
ಅಪಹರಣ ಮಾಡಿ ಆ ಬಳಿಕ ಚಿನ್ನಾಭರಣ ದೋಚಿ ಜಮೀನ್ದಾರರೊಬ್ಬರನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

ಜಮೀನ್ದಾರ ವೆಂಕಟಪತಿ ಕೊಲೆಯಾದವರಾಗಿದ್ದಾರೆ. ಇವರನ್ನು ದುಷ್ಕರ್ಮಿಗಳು ಅಪಹರಣ ಮಾಡಿ ಚಿನ್ನಾಭರಣ ದೋಚಿದ್ದಾರೆ.

ಆ ಬಳಿಕ ಮೃತದೇಹವನ್ನು ಯಲಹಂಕ ಸಮೀಪ ಎಸೆದು ಪರಾರಿಯಾಗಿದ್ದಾರೆ. ಮಧ್ಯರಾತ್ರಿ ಈ ಘಟನೆ ನಡೆದಿದೆ.
ಜಮೀನ್ದಾರನ ಬಳಿಯಿದ್ದ ಎಂಟು ಉಂಗುರ, ಚೈನ್, ನಗದನ್ನು ದುಷ್ಕರ್ಮಿಗಳು ಕೊಲೆ ಮಾಡಿ ದೋಚಿದ್ದಾರೆ.

ವೆಂಕಟಪತಿಯವರನ್ನು ಜಮೀನು ವಿವಾದ ಹಿನ್ನೆಲೆಯಲ್ಲಿ ಇಲ್ಲವೆ ಅವರ ಬಳಿಯಿದ್ದ ಚಿನ್ನಾಭರಣಗಳನ್ನು ದೋಚಲು ಅಪಹರಿಸಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ತೊಗರಿ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹಿಸಿ ರೈತರಿಂದ ಪ್ರತಿಭಟನೆ