Webdunia - Bharat's app for daily news and videos

Install App

ಅಭಿನಂದಿಸಲು ಬಂದ ಜಮೀರ್ ಅಹಮ್ಮದ್ ಗೆ ಸಿಎಂ ಕುಮಾರಸ್ವಾಮಿ ಮಾಡಿದ್ದೇನು ಗೊತ್ತಾ?!

Webdunia
ಶನಿವಾರ, 26 ಮೇ 2018 (08:40 IST)
ಬೆಂಗಳೂರು: ವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಗೆದ್ದ ತಕ್ಷಣವೇ ಸದನ ಕಲಾಪ ಮುಂದೂಡಲಾಯಿತು. ಈ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿಗೆ ಶಾಸಕರಿಂದ ಅಭಿನಂದನೆ ನಡೆಯುತ್ತಿತ್ತು.

ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಗುಂಪಾಗಿ ಬಂದು ಕುಮಾರಸ್ವಾಮಿಯವರ ಕೈಕುಲುಕಿ ಅಭಿನಂದನೆ ಸಲ್ಲಿಸುತ್ತಿದ್ದರು. ಈ ಸಂದರ್ಭದಲ್ಲಿ ಹಳೆಯ ದೋಸ್ತಿ, ಮತ್ತೆ ವಿರೋಧಿಗಳಾಗಿದ್ದ ಜಮೀರ್ ಅಹಮ್ಮದ್ ಕೂಡಾ ಕುಮಾರಸ್ವಾಮಿ ಬಳಿ ಬಂದರು.

ಕುಮಾರಸ್ವಾಮಿಯವರ ಕೈಕುಲುಕಿ ಜಮೀರ್ ಅಹಮ್ಮದ್ ಶುಭ ಹಾರೈಸುತ್ತಿದ್ದಂತೆ, ಕುಮಾರಸ್ವಾಮಿ ವಿಶೇಷವಾಗಿ ಜಮೀರ್ ಗೆ ಕೆನ್ನೆ ತಟ್ಟಿ ನಕ್ಕು ಕಳುಹಿಸಿಕೊಟ್ಟರು. ಇದಕ್ಕೂ ಮೊದಲು ಸುದ್ದಿಗಾರರ ಜತೆ ಮಾತನಾಡಿದ್ದ ಜಮೀರ್ ನಾನು ಕುಮಾರಸ್ವಾಮಿ ಈಗ ದೋಸ್ತಿ. ಹಳೆಯ ಕಾಲದಲ್ಲಿದ್ದಷ್ಟು ಒಡನಾಟ ನಮ್ಮಲ್ಲಿ ಇಲ್ಲದಿರಬಹುದು. ಆದರೂ ಸ್ನೇಹಿತರಾಗಿದ್ದೇವೆ ಎಂದಿದ್ದರು. ಅದನ್ನು ಸದನದಲ್ಲಿ ಇಬ್ಬರೂ ಸಾಬೀತುಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments