Webdunia - Bharat's app for daily news and videos

Install App

ಯೂಟ್ಯೂಬ್ ತಂದ ಆಪತ್ತು

Webdunia
ಬುಧವಾರ, 21 ಸೆಪ್ಟಂಬರ್ 2022 (16:50 IST)
ಆರೋಪಿಯನ್ನು ಕಸ್ತೂತಿ ರಮೇಶ್​ ಬಾಬು (35) ಮತ್ತು ಸಹೋದರಿ ರಾಮೇಶ್ವರಿ ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರದ ಪುಣೆ ಮೂಲದ ರಮೇಶ್​ ಬಾಬು, ವಿದ್ಯಾವಂತನಾಗಿದ್ದು, ಕೆಲವು ವರ್ಷಗಳ ಹಿಂದೆ ಹೈದರಾಬಾದ್​ನ ಬಂಡ್ಲಗುಡ ಜಾಗೀರ್ ಕಾಳಿ ಮಂದಿರದ ಬಳಿಯಿರುವ ಶೆಡ್​ ಒಂದರಲ್ಲಿ ಮೆಕಾನಿಕ್​ ಆಗಿ ಕೆಲಸ ಮಾಡುತ್ತಿದ್ದ. ಅದೇ ಏರಿಯಾದ ಯುವತಿಯೊಬ್ಬಳ ಪ್ರೀತಿಯ ಬಲೆಯಲ್ಲಿ ಬಿದ್ದು, ಮದುವೆ ಆಗಿ ಜೀವನ ನಡೆಸುತ್ತಿದ್ದ. ರಮೇಶ್​ ಬಾಬು ತಂಗಿ ಕೆ. ರಾಮೇಶ್ವರಿ ಹೈದರಾಬಾದ್​ನಲ್ಲಿರುವ ಕಾಲೇಜ್​ ಒಂದರಲ್ಲಿ ಮೆಡಿಕಲ್​ ಕೋರ್ಸ್​ ಓದುತ್ತಿದ್ದಳು.
 
ಲಾಕ್​ಡೌನ್​ನಲ್ಲಿ ಕೆಲಸ ಕಳೆದುಕೊಂಡ ರಮೇಶ್​ ಬಾಬು ಆರ್ಥಿಕ ಸಂಕಷ್ಟಕ್ಕೆ ಸಿಲುಕ್ಕಿದ್ದ. ಇದರ ನಡುವೆ ಆತನ ಕಣ್ಣಿಗೆ ಕಂಡಿದ್ದು, ನಕಲಿ ನೋಟುಗಳನ್ನು ಪ್ರಿಂಟ್​ ಮಾಡುವ ಯೂಟ್ಯೂಬ್​ ವಿಡಿಯೋ. ಬಳಿಕ ನಕಲಿ ನೋಟುಗಳನ್ನು ಪ್ರಿಂಟ್​ ಮಾಡಲು ಆರಂಭಿಸಿ, ಅವುಗಳನ್ನು ಏಜೆಂಟ್​ ಮೂಲಕ ವಿನಿಮಯ ಮಾಡಿಕೊಳ್ಳುತ್ತಿದ್ದ. ಅಣ್ಣ-ತಂಗಿ ಇಬ್ಬರು ಅನೇಕ ಬಾರಿ ದೆಹಲಿಗೆ ಭೇಟಿ ನೀಡಿದ್ದು, ನಕಲಿ ನೋಟು ಪ್ರಿಂಟ್​ ಮಾಡಲು ಬೇಕಾದ ಹೊಸ ಪ್ರಿಂಟರ್ಸ್​, ಕೆಮಿಕಲ್ಸ್​ ಮತ್ತು ಇತರೆ ಪದಾರ್ಥಗಳನ್ನು ಕೊಂಡು ತಂದಿದ್ದಾರೆ.
 
ಶೆಡ್​ನಲ್ಲಿ ವಾಸಿಸುತ್ತಿದ್ದ ಆರೋಪಿಗಳು ನಂತರ ಕಾಳಿಮಂದಿರ ಬಳಿ ಇರುವ ಅಪಾರ್ಟ್​ಮೆಂಟ್​ನ ಫ್ಲ್ಯಾಟ್​ ಒಂದನ್ನು ಬಾಡಿಗೆ ಪಡೆದಿದ್ದರು. ಆರೋಪಿಗಳು 100, 200 ಮತ್ತು 500 ರೂ. ನೋಟುಗಳನ್ನು ಮುದ್ರಿಸಿ, ಅವುಗಳನ್ನು ದೆಹಲಿ, ಗುಜರಾತ್​, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮುಂತಾದ ಕಡೆ ಚಲಾವಣೆ ಮಾಡುತ್ತಿದ್ದರು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನದಲ್ಲಿ ಯಾವಾಗಲೂ ಎಲ್ಲಿ ಕೂತರೆ ಸೇಫ್ ಇಲ್ಲಿದೆ ನೋಡಿ ವಿವರ

Karnataka Weather: ಜೂನ್ 16 ರವರೆಗೂ ಈ ಜಿಲ್ಲೆಗಳ ಹವಾಮಾನ ತಪ್ಪದೇ ಗಮನಿಸಿ

ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಸಾವಿಗೀಡಾದವರ ಒಟ್ಟು ಸಂಖ್ಯೆ ಇಲ್ಲಿದೆ

ಕೇರಳದ ರಂಜಿತಾ ಸಾವಿನ ಅಪಹಾಸ್ಯ ಮಾಡಿದ ಉಪ ತಹಶೀಲ್ದಾರ್ ಸಸ್ಪೆಂಡ್

Air India Plane Crash: ಮೃತದೇಹಗಳನ್ನು ಗುರುತಿಸುವುದು ಹೇಗೆ ಇಲ್ಲಿದೆ ಪ್ರಕ್ರಿಯೆ

ಮುಂದಿನ ಸುದ್ದಿ
Show comments