Webdunia - Bharat's app for daily news and videos

Install App

ಯೂಟ್ಯೂಬ್ ತಂದ ಆಪತ್ತು

Webdunia
ಬುಧವಾರ, 21 ಸೆಪ್ಟಂಬರ್ 2022 (16:50 IST)
ಆರೋಪಿಯನ್ನು ಕಸ್ತೂತಿ ರಮೇಶ್​ ಬಾಬು (35) ಮತ್ತು ಸಹೋದರಿ ರಾಮೇಶ್ವರಿ ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರದ ಪುಣೆ ಮೂಲದ ರಮೇಶ್​ ಬಾಬು, ವಿದ್ಯಾವಂತನಾಗಿದ್ದು, ಕೆಲವು ವರ್ಷಗಳ ಹಿಂದೆ ಹೈದರಾಬಾದ್​ನ ಬಂಡ್ಲಗುಡ ಜಾಗೀರ್ ಕಾಳಿ ಮಂದಿರದ ಬಳಿಯಿರುವ ಶೆಡ್​ ಒಂದರಲ್ಲಿ ಮೆಕಾನಿಕ್​ ಆಗಿ ಕೆಲಸ ಮಾಡುತ್ತಿದ್ದ. ಅದೇ ಏರಿಯಾದ ಯುವತಿಯೊಬ್ಬಳ ಪ್ರೀತಿಯ ಬಲೆಯಲ್ಲಿ ಬಿದ್ದು, ಮದುವೆ ಆಗಿ ಜೀವನ ನಡೆಸುತ್ತಿದ್ದ. ರಮೇಶ್​ ಬಾಬು ತಂಗಿ ಕೆ. ರಾಮೇಶ್ವರಿ ಹೈದರಾಬಾದ್​ನಲ್ಲಿರುವ ಕಾಲೇಜ್​ ಒಂದರಲ್ಲಿ ಮೆಡಿಕಲ್​ ಕೋರ್ಸ್​ ಓದುತ್ತಿದ್ದಳು.
 
ಲಾಕ್​ಡೌನ್​ನಲ್ಲಿ ಕೆಲಸ ಕಳೆದುಕೊಂಡ ರಮೇಶ್​ ಬಾಬು ಆರ್ಥಿಕ ಸಂಕಷ್ಟಕ್ಕೆ ಸಿಲುಕ್ಕಿದ್ದ. ಇದರ ನಡುವೆ ಆತನ ಕಣ್ಣಿಗೆ ಕಂಡಿದ್ದು, ನಕಲಿ ನೋಟುಗಳನ್ನು ಪ್ರಿಂಟ್​ ಮಾಡುವ ಯೂಟ್ಯೂಬ್​ ವಿಡಿಯೋ. ಬಳಿಕ ನಕಲಿ ನೋಟುಗಳನ್ನು ಪ್ರಿಂಟ್​ ಮಾಡಲು ಆರಂಭಿಸಿ, ಅವುಗಳನ್ನು ಏಜೆಂಟ್​ ಮೂಲಕ ವಿನಿಮಯ ಮಾಡಿಕೊಳ್ಳುತ್ತಿದ್ದ. ಅಣ್ಣ-ತಂಗಿ ಇಬ್ಬರು ಅನೇಕ ಬಾರಿ ದೆಹಲಿಗೆ ಭೇಟಿ ನೀಡಿದ್ದು, ನಕಲಿ ನೋಟು ಪ್ರಿಂಟ್​ ಮಾಡಲು ಬೇಕಾದ ಹೊಸ ಪ್ರಿಂಟರ್ಸ್​, ಕೆಮಿಕಲ್ಸ್​ ಮತ್ತು ಇತರೆ ಪದಾರ್ಥಗಳನ್ನು ಕೊಂಡು ತಂದಿದ್ದಾರೆ.
 
ಶೆಡ್​ನಲ್ಲಿ ವಾಸಿಸುತ್ತಿದ್ದ ಆರೋಪಿಗಳು ನಂತರ ಕಾಳಿಮಂದಿರ ಬಳಿ ಇರುವ ಅಪಾರ್ಟ್​ಮೆಂಟ್​ನ ಫ್ಲ್ಯಾಟ್​ ಒಂದನ್ನು ಬಾಡಿಗೆ ಪಡೆದಿದ್ದರು. ಆರೋಪಿಗಳು 100, 200 ಮತ್ತು 500 ರೂ. ನೋಟುಗಳನ್ನು ಮುದ್ರಿಸಿ, ಅವುಗಳನ್ನು ದೆಹಲಿ, ಗುಜರಾತ್​, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮುಂತಾದ ಕಡೆ ಚಲಾವಣೆ ಮಾಡುತ್ತಿದ್ದರು.
 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments