Publish Date: Mon, 17 Jan 2022 (09:10 IST)
Updated Date: Mon, 17 Jan 2022 (09:28 IST)
ಹಾಸನ: ದೊಡ್ಡವರು ಬುದ್ಧಿ ಮಾತು ಹೇಳಿದರೆ ಅದು ಇಂದಿನ ಯುವ ಜನಾಂಗಕ್ಕೆ ಇಷ್ಟವಾಗಲ್ಲ. ಅಂತೆಯೇ ಇಲ್ಲೊಬ್ಬ ವ್ಯಕ್ತಿ ತನಗೆ ಬುದ್ಧಿ ಮಾತು ಹೇಳಿದ್ದಕ್ಕೆ ಮಧ್ಯವಯಸ್ಕ ವ್ಯಕ್ತಿಯನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.
ಮದ್ಯ ಮಾರಾಟ ಮಾಡದಂತೆ 50 ವರ್ಷದ ವ್ಯಕ್ತಿ ಯುವಕನಿಗೆ ಬುದ್ಧಿ ಮಾತು ಹೇಳಿದ್ದಾರೆ. ಆದರೆ ಇದು ಯವಕನಿಗೆ ಇಷ್ಟವಾಗಿಲ್ಲ. ಇದರಿಂದ ಆಕ್ರೋಶಗೊಂಡ ಆತ ಸೇಡು ತೀರಿಸಿಕೊಂಡಿದ್ದಾನೆ.
ಕೊಡಲಿಯನ್ನು ಉಪಯೋಗಿಸಿ ಬುದ್ಧಿ ಹೇಳಿದ ವ್ಯಕ್ತಿಯನ್ನೇ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಯುವಕನನ್ನು ಬಂಧಿಸಿದ್ದಾರೆ.