Select Your Language

Notifications

webdunia
webdunia
webdunia
webdunia

ಮದುವೆ ಮಾತುಕತೆಗೆ ಕರೆದು ಮಗಳ ಬಾಯ್ ಫ್ರೆಂಡ್ ಖತಂ ಮಾಡಿದ ತಂದೆ

ಮದುವೆ ಮಾತುಕತೆಗೆ ಕರೆದು ಮಗಳ ಬಾಯ್ ಫ್ರೆಂಡ್ ಖತಂ ಮಾಡಿದ ತಂದೆ
ಬೆಂಗಳೂರು , ಗುರುವಾರ, 8 ಅಕ್ಟೋಬರ್ 2020 (11:12 IST)
ಬೆಂಗಳೂರು: ಮದುವೆ ಮಾತುಕತೆ ಮಾಡೋಣ ಎಂದು ತಂದೆ ಮಗಳ ಪ್ರಿಯಕರನನ್ನು ನಿರ್ಜನ ಪ್ರದೇಶಕ್ಕೆ ಕರೆದು ಜೀವ ತೆಗೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಕಳೆದ ತಿಂಗಳು ಯುವತಿ ಮನೆ ಬಿಟ್ಟು ಅಂತರ್ ಧರ್ಮೀಯ ಪ್ರಿಯಕರನ ಜತೆ ಓಡಿಹೋಗಿದ್ದಳು. ಇದೀಗ ಯುವತಿಯ ತಂದೆ ಮಾತುಕತೆ ನಡೆಸುವ ನೆಪದಲ್ಲಿ ಆಕೆಯ ಬಾಯ್ ಫ್ರೆಂಡ್ ನ್ನು ಬೆಂಗಳೂರಿನ ಹೊರವಲಯದಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದಿದ್ದಾರೆ. ಈ ವೇಳೆ ಆತನ ಜತೆಗೆ ಸಹೋದರನನ್ನೂ ಕರೆತಂದಿದ್ದ. ಆದರೆ ಮದುವೆ ಮಾತುಕತೆ ಮಾಡುವ ಬದಲು ಯುವತಿಯ ತಂದೆ ವಿನಾಕಾರಣ ತಗಾದೆ ತೆಗೆದು ಯುವಕನ ಪ್ರಾಣ ತೆಗೆದಿದ್ದಾರೆ. ತಕ್ಷಣ ಅಲ್ಲಿಂದ ತಪ್ಪಿಸಿಕೊಂಡ ಸಹೋದರ ಪೊಲೀಸರ ಬಳಿ ಹೋಗಿ ದೂರು ನೀಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನೂ ಒಂದು ತಿಂಗಳು ಶಾಲೆ ಆರಂಭ ಸೂಕ್ತವಲ್ಲ- ಆರೋಗ್ಯ ಇಲಾಖೆ ಸಲಹೆ