ಪುತ್ತೂರು: ದ್ವಿಚಕ್ರ ವಾಹನ ಅಪಘಾತದ ಪರಿಹಾರವಾಗಿ ನೀಡಬೇಕಿದ್ದ ಹಣದ ವಿಚಾರದಲ್ಲಿ ಜಗಳವಾಗಿ ದ.ಕ. ಜಿಲ್ಲೆಯ ಪುತ್ತೂರಿನ ಯುವಕನ ಕೊಲೆಯಾಗಿದೆ.
									
			
			 
 			
 
 			
			                     
							
							
			        							
								
																	26 ವರ್ಷದ ಅಕ್ಷಯ್ ಕಲ್ಲೇಗ ಕೊಲೆಗೀಡಾದಾತ. ಹುಲಿವೇಷ ತಂಡದ ಮುಖ್ಯಸ್ಥನಾಗಿದ್ದ ಈತ ಹಾಗೂ ಆರೋಪಿಗಳ ನಡುವೆ 2 ಸಾವಿರ ರೂ. ಪರಿಹಾರ ನೀಡುವ ವಿಚಾರಕ್ಕೆ ಜಗಳವಾಗಿದೆ.
									
										
								
																	ಮೂವರು ಆರೋಪಿಗಳ ಗುಂಪು ಅಕ್ಷಯ್ ನನ್ನು ನೆಹರು ನಗರದ ಜಂಕ್ಷನ್ ಬಳಿ ಅಟ್ಟಾಡಿಸಿ ತಲ್ವಾರ್ ನಿಂದ ಕೊಚ್ಚಿ ಕೊಲೆ ಮಾಡಿದೆ. ಈ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.