Select Your Language

Notifications

webdunia
webdunia
webdunia
webdunia

ತಾಯಿಯೊಂದಿಗೆ ಜಗಳ ಮಾಡಿದ ಅಣ್ಣನಿಗೆ ತಮ್ಮ ಮಾಡಿದ್ದೇನು ಗೊತ್ತಾ?

ತಾಯಿಯೊಂದಿಗೆ ಜಗಳ ಮಾಡಿದ ಅಣ್ಣನಿಗೆ ತಮ್ಮ ಮಾಡಿದ್ದೇನು ಗೊತ್ತಾ?
ಮಡಿಕೇರಿ , ಗುರುವಾರ, 21 ಮೇ 2020 (09:06 IST)
Normal 0 false false false EN-US X-NONE X-NONE

ಮಡಿಕೇರಿ : ತಾಯಿಯೊಂದಿಗೆ ಜಗಳ ಮಾಡಿದ್ದಕ್ಕೆ ಅಣ್ಣನನ್ನೇ ತಮ್ಮನೊಬ್ಬ ಗುಂಡು ಹಾರಿಸಿ ಕೊಂದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿಳಗುಂದದಲ್ಲಿ ನಡೆದಿದೆ.

 

ಸುರೇಶ್ (48)ಕೊಲೆಯಾದ ಅಣ್ಣ, ಕುಮಾರ್ ಕೊಲೆ ಮಾಡಿದ ಆರೋಪಿ . ಕುಮಾರನ ದೊಡ್ಡಪ್ಪನ ಮಗನಾದ ಸುರೇಶ್, ಕುಮಾರನ ತಾಯಿಯ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದಾನೆ. ಆ ವೇಳೆ ಕುಡಿದ ಮತ್ತಿನಲ್ಲಿದ್ದ ಕುಮಾರ್ ಸುರೇಶ್ ನಿಗೆ ಶೂಟ್ ಮಾಡಿದ್ದಾನೆ. ಪರಿಣಾಮ ಸುರೇಶ್ ಸ್ಥಳದಲ್ಲೇ ಸಾವನಪ್ಪಿದ್ದಾನೆ.

 

ಈ ಘಟನೆಗೆ ಸಂಬಂಧಿಸಿದಂತೆ ವಿರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಬಳಿಕ ಕುಮಾರ್ ಪರಾರಿಯಾಗಿದ್ದ ಕಾರಣ ಪೊಲೀಸರು ಕುಮಾರನ ಬಂಧನಕ್ಕೆ ಬಲೆ ಬೀಸಿದ್ದಾರೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ನೇಪಾಳದಲ್ಲಿ ಕೊರೊನ ವೈರಸ್ ಹೆಚ್ಚಾಗಲು ಭಾರತ ಕಾರಣವೆಂದ ನೇಪಾಳದ ಪ್ರಧಾನಿ