Publish Date: Wed, 22 Jul 2020 (21:36 IST)
Updated Date: Wed, 22 Jul 2020 (21:38 IST)
ಬಹು ನಿರೀಕ್ಷಿತ ವಿಧಾನ ಪರಿಷತ್ ನಾಮ ನಿರ್ದೇಶನ ಕೊನೆಗೂ ನಡೆದಿದ್ದು, ಹಳ್ಳಿ ಹಕ್ಕಿ ಮತ್ತೆ ರಾಜಕೀಯ ಹಾರಾಟ ನಡೆಸಿದ್ದು, ಯೋಗೇಶ್ವರ್ ಗೂ ಯೋಗಾಯೋಗಾ ಕೂಡಿಬಂದಿದೆ.
ರಾಜ್ಯ ಸರಕಾರವು ಐದು ಜನರನ್ನು ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.
ವಿಧಾನ ಪರಿಷತ್ ಗೆ ನೂತನವಾಗಿ ನಾಮ ನಿರ್ದೇಶನಗೊಂಡವರು ಇವರು,
ಸಿ. ಪಿ. ಯೊಗೇಶ್ವರ್ (ಸಿನಿಮಾ ಕ್ಷೇತ್ರ)
ಹೆಚ್.ವಿಶ್ವನಾಥ್ (ಸಾಹಿತ್ಯ ಕ್ಷೇತ್ರ)
ಶಾಂತಾರಾಮ ಸಿದ್ದಿ (ಬುಡಕಟ್ಟು ಜನಾಂಗದಿಂದ)
ಸಾಬಣ್ಣ ತಳವಾರ್ (ಶಿಕ್ಷಣ ರಂಗದಿಂದ)
ಭಾರತಿ ಶೆಟ್ಟಿ (ಸಮಾಜಸೇವೆ ವಿಭಾಗದಿಂದ)