Select Your Language

Notifications

webdunia
webdunia
webdunia
webdunia

ಎತ್ತಿನಹೊಳೆ ಯೋಜನೆ ನಿಲ್ಲದು: ಸಚಿವ ರಮಾನಾಥ್ ರೈ ಘೋಷಣೆ

ಎತ್ತಿನಹೊಳೆ ಯೋಜನೆ ನಿಲ್ಲದು: ಸಚಿವ ರಮಾನಾಥ್ ರೈ ಘೋಷಣೆ
ಮಂಗಳೂರು , ಶನಿವಾರ, 31 ಡಿಸೆಂಬರ್ 2016 (17:59 IST)
ರಾಜ್ಯದಲ್ಲಿ ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಎತ್ತಿನಹೊಳೆ ಯೋಜನೆ ನಿಲ್ಲದು ಎಂದು ದಕ್ಷಿಣ ಕನ್ನಡ ಉತ್ತರ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಹೇಳಿದರು.
 
ಮಂಗಳೂರಿನ ನೂತನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲಿದ್ದಾಗ ಜಾರಿಯಾಗಿದ್ದು, ಅದನ್ನು ಕಾಂಗ್ರೆಸ ಸರಕಾರ ಮುಂದುವರೆಸಿದೆ ಎಂದರು.
 
ಈಗಾಗಲೇ ಯೋಜನೆಯ ಸಾಧಕ-ಬಾಧಕಗಳ ಕುರಿತು ತಜ್ಞರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚಿಸಿದ್ದಾರೆ. ಯೋಜನೆ ವಿರುದ್ಧದ ಹೋರಾಟಗಾರರಿಗೂ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮನವರಿಕೆ ಮಾಡಿಕೊಡಲಾಗಿದೆ ಎಂದು ಸ್ಪಷ್ಟಪಡಿಸಿದರು. 
 
ಎತ್ತಿನ ಹೊಳೆ ಯೋಜನೆ ಸರಕಾರ ಅನುಮತಿ ನೀಡಿಲ್ಲ ಎಂದು ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಇಲಾಖೆ ಸಚಿವ ಅನಿಲ್ ಮಾಧವ ಧವೆ ನೀಡಿದ ಪ್ರತಿಕ್ರಿಯ ಕುರಿತು ಮಾಧ್ಯದವರ ಪ್ರಶ್ನೆಗೆ ಉತ್ತರಿಸಿದ ದಕ್ಷಿಣ ಕನ್ನಡ ಉತ್ತರ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ, ಹಾಗಿದ್ದರೆ ಅವರು ಯೋಜನೆಯನ್ನು ನಿಲ್ಲಿಸಬಹುದಲ್ವ ಎಂದು ಮಾರ್ಮಿಕವಾಗಿ ಉತ್ತರಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಗುವನ್ನು ಹೆತ್ತಳು 64 ವರ್ಷದ ವೃದ್ಧೆ