Select Your Language

Notifications

webdunia
webdunia
webdunia
webdunia

ಯಡಿಯೂರಪ್ಪನವರ ಭವಿಷ್ಯ ಜೋತಿಷ್ಯದ ಮೇಲೆ ನಿಂತಿದೆ: ಸಚಿವ ಜಯಚಂದ್ರ

ಯಡಿಯೂರಪ್ಪನವರ ಭವಿಷ್ಯ ಜೋತಿಷ್ಯದ ಮೇಲೆ ನಿಂತಿದೆ: ಸಚಿವ ಜಯಚಂದ್ರ
ತುಮಕೂರು , ಬುಧವಾರ, 21 ಡಿಸೆಂಬರ್ 2016 (17:46 IST)
ಯಡಿಯೂರಪ್ಪನವರಿಗೆ ಜ್ಯೋತಿಷ್ಯದ ಮೇಲೆ ನಂಬಿಕೆ ಇದೆ. ಬಿಜೆಪಿ ಪಕ್ಷ ಜ್ಯೋತಿಷ್ಯದ ಮೇಲೆ ನಿಂತಿದೆ ಎಂದು ಸಚಿವ ಟಿ.ಬಿ ಜಯಚಂದ್ರ ಲೇವಡಿ ಮಾಡಿದ್ದಾರೆ.
 
ತುಮಕೂರು ಜಿಲ್ಲೆಯ ಪಾವಗಡ್ ತಾಲೂಕಿನಲ್ಲಿ ಬರ ನಿರ್ವಹಣಾ ಅಧ್ಯಯನಕ್ಕೆಂದು ವಿವಿಧೆಡೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ತೀವ್ರ ಬರಗಾಲ ಸ್ಥಿತಿಯನ್ನು ಎದುರಿಸುತ್ತಿದ್ದು, ಇಂತಹ ಸಮಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.
 
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದರೂ ಲೋಕಸಭೆಗೆ ಹೆಚ್ಚಾಗಿ ಬಿಜೆಪಿ ಸದಸ್ಯರನ್ನೂ ಆಯ್ಕೆ ಮಾಡಿದ್ದಾರೆ. ಆದರೆ, ರಾಜ್ಯದ ಸಮಸ್ಯೆ ಕುರಿತು ಚರ್ಚಿಸಲು ಪ್ರಧಾನಿ ಮಂತ್ರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವಕಾಶ ನೀಡದಿರುವುದಕ್ಕೆ ಏನು ಹೇಳಬೇಕು ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 
 
ಬರಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ಮೋದಿ ಅವಕಾಶ ನೀಡುತ್ತಾರೆ ಎನ್ನುವ ನಂಬಿಕೆ ಇತ್ತು. ಆದರೆ. ನಮ್ಮ ನಂಬಿಕೆ ಹುಸಿಯಾಗಿದೆ. ಪ್ರಧಾನಿ ಲೋಕಸಭೆಗೂ ಬರುವುದಿಲ್ಲ, ಭೇಟಿಗೂ ಅವಕಾಶ ನೀಡುವುದಿಲ್ಲ ಎಂದು ಸಚಿವ ಟಿ.ಬಿ.ಜಯಚಂದ್ರ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಐಟಿ, ಇಡಿ ಮೋದಿ ಅಧೀನದಲ್ಲಿರುವುದರಿಂದ ಬಿಎಸ್‌ವೈಗೆ ಮಾಹಿತಿಯಿರಬೇಕು: ಕುಮಾರಸ್ವಾಮಿ