Publish Date: Thu, 22 Dec 2022 (12:44 IST)
Updated Date: Thu, 22 Dec 2022 (12:22 IST)
ಬೆಳಗಾವಿ : ಸಾಕು ತಂದೆಯ ವಚನ ಪಾಲಿಸಲು ಮುಂದಾಗಿ ಸಿಎಂ ಗೊಂದಲದಲ್ಲಿದ್ದಾರೆ ಮೀಸಲಾತಿಗಾಗಿ ನೋಡೋಣ ಸಿಎಂ ಏನು ಆಟ ಆಡ್ತಾರೆ, ಅವರ ಹಿಂದೆ ಯಾರ ಇದ್ದಾರೆ ನೋಡೋಣ. ಸಿಹಿ ಸುದ್ದಿನೋ ನಾಟಕನಾ ಗೊತ್ತಿಲ್ಲ.
ಹುಚ್ಚು ಸಾಹಸಕ್ಕೆ ಸಿಎಂ ಕೈಹಾಕಬಾರದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.
ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಹಿನ್ನೆಲೆ ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡೂ ವರ್ಷ ಆಯ್ತು ಕಥೆ ಬೇಡ. ಬೇಗ ವರದಿ ತರಿಸಲು ಹೇಳಿದ್ದೆವು. ಅಂತಿಮ ವರದಿ ಎಂದು ಕಥೆ ಹೇಳ್ತಾರೆ.
ಮಾತು ಕೇಳೇ ಹಾಳಾಗ್ತಾರೆ, ಸಾಕು ತಂದೆಯ ವಚನ ಪಾಲಿಸಲು ಅವರು ಮುಂದಾಗಿದ್ದಾರೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.