Webdunia - Bharat's app for daily news and videos

Install App

ಗಾಯಗೊಂಡ ಕೋತಿ - ಮಾನವೀಯತೆ ಮೆರೆದ ಯುವಕರು

Webdunia
ಶುಕ್ರವಾರ, 6 ಜುಲೈ 2018 (14:31 IST)
ತೀವ್ರ ಗಾಯಗೊಂಡು ರಸ್ತೆ ಒದ್ದಾಡುತ್ತಿದ್ದ ಕೋತಿಯ ನ್ನ ಕೊಂಡೋಯ್ದು ಚಿಕಿತ್ಸೆ ಕೊಡಿಸಿ ಪೋಷಣೆ ಮಾಡುವ ಮೂಲಕ ತುಮಕೂರಿನ ಯುವಕರ ತಂಡವೊಂದು ಮಾನವೀಯತೆ ಮೆರೆದಿದೆ. 
 
ಇಲ್ಲಿನ ಹನುಮಂತಪುರ ನಿವಾಸಿಗಳಾದ ನವೀನ್ ಚೇತನ್ ,ರಾಜೇಶ್ , ಮಂಜು ಎಂಬುವರು ತಡರಾತ್ರಿ ಸಮೀಪದ ದೇವರಾಯನದುರ್ಗ ಪ್ರವಾಸಿ ತಾಣಕ್ಕೆ ತೆರಳಿ ವಾಪಾಸ್ ಆಗುತ್ತಿದ್ದರು. ಈ ವೇಳೆ ರಸ್ತೆ ಮಧ್ಯೆ ತಮ್ಮ ಕಾರಿಗೆ ಅಡ್ಡವಾಗಿ ಬಂದ ಮಂಗವೊಂದು ಮುಂದೆ ಸಾಗದೆ ಒದ್ದಾಡುತ್ತಿತ್ತು.

ಬಳಿಕ ಕಾರಿನಿಂದ ಕೆಳಗಿಳಿದ ಯುವಕರು ಮಂಗ ತೀವ್ರ ಗಾಯಗಳಿಂದ ಬಳಲುತ್ತಿರುವುದನ್ನ ಕಂಡು ಕೂಡಲೇ ಸಮೀಪದ  ಆಸ್ಪತ್ರೆಗೆ ಕೋಂಡೋಯ್ದು ಚಿಕಿತ್ಸೆ ಕೊಡಿಸಿ, ಇದೀಗ ಸ್ನೇಹಿತನ‌ ಮನೆಯಲ್ಲಿ ಪೋಷಿಸುತ್ತಿದ್ದಾರೆ.  ತುಮಕೂರಿನ‌ ಈ ಯುವಕರ ಮಾನವೀಯ ಕಾರ್ಯಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments