Webdunia - Bharat's app for daily news and videos

Install App

ಚಿಕ್ಕ ವಯಸ್ಸಿನಲ್ಲಿ ಹೋಟೆಲ್ ಕ್ಷೇತ್ರದಲ್ಲಿ ಗೆದ್ದ ಹೆಣ್ಣುಮಗಳು..!!!

Webdunia
ಸೋಮವಾರ, 26 ಸೆಪ್ಟಂಬರ್ 2022 (14:52 IST)
ಬೆಂಗಳೂರಿನಲ್ಲಿ ರೆಸ್ಟೋರೆಂಟ್ ಆರಂಭಿಸಲು ಬಯಸಿದಾಗ, ತಂದೆ ತಮ್ಮ ವ್ಯವಹಾರದ ಅನುಭವಗಳನ್ನು ವಿವರಿಸಿದರು. ಆಂಧ್ರ, ತಮಿಳುನಾಡು, ಕೇರಳ ಇತ್ಯಾದಿ ವಿಶೇಷ ರೆಸ್ಟೋರೆಂಟ್‌ಗಳು ಬೆಂಗಳೂರಿನಲ್ಲಿ ಪ್ರತಿ ಹೆಜ್ಜೆಯಲ್ಲೂ ಕಂಡುಬರುತ್ತವೆ. ಆದರೆ ಒಳಗೆ ಎಲ್ಲೆಡೆ ಒಂದೇ ರೀತಿಯ ಭಕ್ಷ್ಯಗಳನ್ನು ನೀಡಲಾಗುತ್ತದೆ. ನನ್ನ ರೆಸ್ಟೊರೆಂಟ್ ಹಾಗಾಗುವುದು ನನಗೆ ಇಷ್ಟವಿರಲಿಲ್ಲ. ಹೀಗಾಗಿ ನಾವು ಮನೆಯಲ್ಲಿ ಅಡುಗೆ ಮಾಡುವ ಆಂಧ್ರದ ಅತ್ಯುತ್ತಮ ಖಾದ್ಯಗಳ ಮೆನು ಸಿದ್ಧಪಡಿಸಿದ್ದೇವೆ. ಉಳವಚಾರು ಬಿರಿಯಾನಿ, ಗುಂಟೂರು ಗೊಂಗೂರ, ಅವಚಯ ಬಿರಿಯಾನಿ, ಪಲ್ನಾಡು ನಾಟುಕೋಡಿ ಬಿರಿಯಾನಿ ಈ ಮೆನುವಿನಲ್ಲಿವೆ. ವಿದ್ಯಾರ್ಥಿಗಳು ಮತ್ತು ಸಣ್ಣ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಅನ್ ಲಿಮಿಟೆಡ್ ಬಿರಿಯಾನಿ ಮತ್ತು ಕೆಲವು ಚಿಕನ್ ಸ್ಟಾರ್ಟರ್‌ಗಳನ್ನು ಕೇವಲ 299 ರೂ.ಗೆ ನೀಡಿದೆವು. ಈ ಕ್ರಮದಿಂದ ನಾವು ಪ್ರಖ್ಯಾತಿ ಪಡೆಯಲಾರಂಭಿಸಿದೆವು. ಇತರ ಹೋಟೆಲ್‌ಗಳು ಕೂಡ ನಮ್ಮಂತೆಯೇ ಮಾಡಲು ಆರಂಭಿಸಿದವು. ಖಾದ್ಯಗಳಿಗೆ ಮನೆಯಲ್ಲಿಯೇ ಮಸಾಲೆ ಪುಡಿಗಳನ್ನು ತಯಾರಿಸುವ ಮಾಡುವ ಮೂಲಕ ನಾವು ರುಚಿ ಮತ್ತು ಗುಣಮಟ್ಟದಲ್ಲಿ ಅನನ್ಯರಾಗಿದ್ದೇವೆ.
ನೂರಾರು ಹೋಟೆಲ್‌ಗಳಿರುವ ಕಲ್ಯಾಣನಗರದಲ್ಲಿ ನಾವು ಕೇವಲ ಮೂರು ವರ್ಷದಲ್ಲಿ ವಾರ್ಷಿಕ ರೂ. 9 ಕೋಟಿ ರೂ. ವ್ಯವಹಾರ ನಡೆಸುತ್ತಿದ್ದೇವೆ. ಹೋಟೆಲಿನ ಆಸನಗಳ ಸಾಮರ್ಥ್ಯವನ್ನು 60ರಿಂದ 200ಕ್ಕೆ ಹೆಚ್ಚಿಸಿದ್ದೇವೆ. ನಗರದಲ್ಲಿ ಇನ್ನೂ ಎರಡು ಮಳಿಗೆಗಳನ್ನು ತೆರೆದಿದ್ದೇವೆ. ಈ ಯಶಸ್ಸಿಗೆ ಮುಖ್ಯ ಕಾರಣವೆಂದರೆ ಆಂಧ್ರ ಶೈಲಿಯ ಪಾಕಪದ್ಧತಿಯನ್ನು ಮುಂದುವರಿಸಿದ್ದು ಮತ್ತು ಇತರ ವಿಶೇಷ ಖಾದ್ಯಗಳನ್ನು ಪರಿಚಯಿಸಿದ್ದು. ಎರಡು ವರ್ಷಗಳ ಕಾಲ ಪ್ರತಿದಿನ 12-14 ಗಂಟೆಗಳ ಕೆಲಸ ಮಾಡಿದ್ದೇನೆ. ಸಾಮಾನು ತರುವುದು, ಅಡುಗೆಯ ಮೇಲ್ವಿಚಾರಣೆ, ಫ್ರಂಟ್ ಆಫೀಸ್.. ಎಲ್ಲವನ್ನೂ ನಾನೇ ನೋಡಿಕೊಳ್ಳುತ್ತಿದ್ದೆ. ಕೋವಿಡ್ ಸಮಯದಲ್ಲಿ ಹೊಸ ಬದಲಾವಣೆಗಳನ್ನು ಪ್ರಯೋಗ ಮಾಡಿದೆವು. ಆ ಸಮಯದಲ್ಲಿ 20 ವಿವಿಧ ಖಾದ್ಯಗಳನ್ನು ಕೇವಲ ರೂ.349 ಕ್ಕೆ ನೀಡುವ ನಮ್ಮ ಐಡಿಯಾ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಸಾವಿಗೀಡಾದವರ ಒಟ್ಟು ಸಂಖ್ಯೆ ಇಲ್ಲಿದೆ

ಕೇರಳದ ರಂಜಿತಾ ಸಾವಿನ ಅಪಹಾಸ್ಯ ಮಾಡಿದ ಉಪ ತಹಶೀಲ್ದಾರ್ ಸಸ್ಪೆಂಡ್

Air India Plane Crash: ಮೃತದೇಹಗಳನ್ನು ಗುರುತಿಸುವುದು ಹೇಗೆ ಇಲ್ಲಿದೆ ಪ್ರಕ್ರಿಯೆ

ಇದ್ದಕ್ಕಿದ್ದಂತೆ ಇಂದು ಚಿನ್ನಸ್ವಾಮಿ ಕಾಲ್ತುಳಿತ ವಿರೋಧಿಸಿ ಬಿಜೆಪಿ ಪ್ರತಿಭಟನೆ ಹಿಂಪಡೆದಿದ್ದೇಕೆ

Indore: ರಾಜ ರಘುವಂಶಿ ಜೊತೆ ಇನ್ನೊಬ್ಬ ಮಹಿಳೆಯ ಹತ್ಯೆಗೆ ಸೋನಂ ಆಂಡ್ ಗ್ಯಾಂಗ್ ಸ್ಕೆಚ್ ಹಾಕಿದ್ದೇಕೆ

ಮುಂದಿನ ಸುದ್ದಿ
Show comments