Select Your Language

Notifications

webdunia
webdunia
webdunia
webdunia

ಬಳೆ ಶಾಸ್ತ್ರ ಗಲಾಟೆ ಮಹಿಳೆಗೆ ಥಳಿತ

ಬಳೆ ಶಾಸ್ತ್ರ ಗಲಾಟೆ ಮಹಿಳೆಗೆ ಥಳಿತ
ಬೆಂಗಳೂರು , ಬುಧವಾರ, 29 ಡಿಸೆಂಬರ್ 2021 (18:32 IST)

ಮದುವೆ ಮನೆಯಲ್ಲಿ ಬಳೆ ಶಾಸ್ತ್ರದ ವೇಳೆ ತೊಡಿಸಿದ ಬಳೆ ಹಣ ಕೇಳಿದಕ್ಕೆ ಸಂತೋಷ್ ಎಂಬುವವರು ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಪದ್ಮಮ್ಮ(50) ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದುವರೆ ವರ್ಷದ ಹಿಂದೆ ಪದ್ಮಮ್ಮ ಮನೆಯ ಪಕ್ಕದ ಮನೆಯಲ್ಲಿರುವ ಸಂತೋಷ್ ಮದುವೆ ಸಂದರ್ಭದಲ್ಲಿ, ಪದ್ಮಮ್ಮ ಮದುವೆ ಹೆಣ್ಣಿಗೆ ಹಾಗೂ ಮದುವೆಗೆ ಬಂದವರಿಗೆ ಬಳೆ ಶಾಸ್ತ್ರದ ವೇಳೆ ಬಳೆ ತೊಡಿಸಿದ್ದರು. ಒಟ್ಟು 3ಸಾವಿರದ ಬಿಲ್ ಆಗಿತ್ತು. ಮದುವೆ ದಿನವೇ ಒಂದು ಸಾವಿರ ಹಣ ಕೊಟ್ಟು ಉಳಿದ ಹಣ ಕೊಡುವುದಾಗಿ ಹೇಳಿ ಸುಮ್ಮನಾಗಿದ್ರು. ಹೀಗಾಗಿ ಉಳಿದ 2 ಸಾವಿರ ಹಣಕ್ಕಾಗಿ ಪದ್ಮಮ್ಮ ಆಗಾಗಾ ಸಂತೋಷ್ ಬಳಿ ಕೇಳುತ್ತಿದ್ದರು. ಆದ್ರೆ ಕೊಡುವುದಾಗಿ ಕೇಳಿ ಸಂತೋಷ್ ಸುಮ್ಮನಾಗಿದ್ದ.

ಅದರಂತೆ ಎರಡು ದಿನ ಹಿಂದೆ ರಾತ್ರಿ 9 ಗಂಟೆ ಸುಮಾರಿಗೆ ಪದ್ಮಮ್ಮ ಮತ್ತೆ ಸಂತೋಷ್ ಬಳಿ ಬಾಕಿ ಹಣ ಕೊಡುವುದಾಗಿ ಕೇಳಿದ್ದಾರೆ. ಖರ್ಚುಗೆ ಹಣವಿಲ್ಲ ಸ್ವಲ್ಪ ಹಣವಾದ್ರು ಕೊಡಿ ಅಂತ ಕೇಳಿದ್ದಕ್ಕೆ ಸಂತೋಷ್, ಜನರೆದುರು ಮರ್ಯಾದೆ ಹೋಯಿತೆಂದು ರೊಟ್ಟಿ ಹೆಂಚಿನಿಂದ ಹಲ್ಲೆ ಮಾಡಿದ್ದಾರೆ ಎಂದು ಪದ್ಮಮ್ಮ ದೂರು ದಾಖಲಿಸಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆಗಳ ಬಲವರ್ಧನೆಗೆ ಸಮುದಾಯದ ಸಹಕಾರ ಅಗತ್ಯ