Select Your Language

Notifications

webdunia
webdunia
webdunia
webdunia

ನೊಂದ ಮಹಿಳೆಗೆ ಸ್ಪಂದಿಸಿದ ದೇವೇಗೌಡರು: ಮಹಿಳೆಯ ಪತಿಗೆ ಸ್ವಂತ ಅಟೋ ಕೊಡಿಸುವ ಭರವಸೆ

ನೊಂದ ಮಹಿಳೆಗೆ ಸ್ಪಂದಿಸಿದ ದೇವೇಗೌಡರು: ಮಹಿಳೆಯ ಪತಿಗೆ ಸ್ವಂತ ಅಟೋ ಕೊಡಿಸುವ ಭರವಸೆ
ಬೆಂಗಳೂರು , ಮಂಗಳವಾರ, 24 ಮೇ 2016 (15:16 IST)
ಜನತಾದರ್ಶನದಲ್ಲಿ ದಲಿತ ಮಹಿಳೆಗೆ ಕಿರುಕುಳ ಪ್ರಕರಣ ನೊಂದ ದಲಿತ ಮಹಿಳೆಯ ಅಳಲಿಗೆ ಸ್ಪಂದಿಸಿ ಅವರ ಕುಟುಂಬಕ್ಕೆ ಸ್ವಂತ ಆಟೋ ನೀಡುವುದಾಗಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೆಗೌಡ ಭರವಸೆ ನೀಡಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನತಾದರ್ಶನದಲ್ಲಿ ದಲಿತ ಮಹಿಳೆಗೆ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಧಾನಸೌಧದಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ದಲಿತ ಮಹಿಳೆಯೊಂದಿಗೆ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯ ನಂತರ ನೊಂದ ದಲಿತ ಮಹಿಳೆ ಈ ಘಟನೆ ನಡೆದಿರುವ ಕಾರಣಕ್ಕಾಗಿ ತನ್ನ ಪತಿಗೆ ಬಾಡಿಗೆಗೆ ಓಡಿಸಲು ಆಟೋ ಸಿಗಲಿಲ್ಲವೆಂದು ಅಳಲು ತೊಡಿಕೊಂಡಿದ್ದಾಳೆ.  
 
ನೊಂದ ಮಹಿಳೆಯ ಅಳಲಿಗೆ ಸ್ಪಂದಿಸಿದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೆಗೌಡ, ತಮ್ಮ ಸ್ವಂತ ಕರ್ಚಿನಲ್ಲಿ ದಲಿತ ಮಹಿಳೆಯ ಪತಿಗೆ ಆಟೋ ನೀಡುವುದಾಗಿ ಭರವಸೆ ನೀಡಿದ್ದಾರೆ.
 
ಬೆಂಗಳೂರಿನ ವಿಜಯನಗರದ ಹೊಸಹಳ್ಳಿಯ ನಿವಾಸಿ ಸವಿತಾ, ತಮ್ಮಗೆ ನ್ಯಾಯಬದ್ದವಾಗಿ ಸಿಗಬೇಕಾಗಿದ್ದ ಹಕ್ಕು ಪತ್ರ ಪಡೆಯಲು ಮೇ 17 ರಂದು ಮುಖ್ಯಮಂತ್ರಿ ಜನಾತಾದರ್ಶನಕ್ಕೆ ತೆರಳಿ ದೌರ್ಜನ್ಯಕೊಳ್ಳಗಾಗಿದ್ದರು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಎಂಇಎಸ್ ಸದಸ್ಯರಿಗೆ ಖಡಕ್ ಎಚ್ಚರಿಕೆ ನೀಡಿದ ಚುನಾವಣಾಧಿಕಾರಿ