Select Your Language

Notifications

webdunia
webdunia
webdunia
webdunia

ಯಾವ ಮುಲಾಜಿಲ್ಲದೇ ಓರಾಯನ್ ಮಾಲ್‌ ವಿರುದ್ಧ ಕ್ರಮ: ಮೇಯರ್ ಮಂಜುನಾಥ್

ಕನ್ನಡ ಪ್ರಾದೇಶಿಕ
ಬೆಂಗಳೂರು , ಸೋಮವಾರ, 22 ಆಗಸ್ಟ್ 2016 (11:19 IST)
ಯಾವ ಮುಲಾಜಿಗೂ ಒಳಗಾಗವುದೇ ರಾಜುಕಾಲುವೆ ನುಂಗಿರುವ ಓರಾಯನ್ ಮಾಲ್‌ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಮೇಯರ್ ಮಂಜುನಾಥ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓರಾಯನ್ ಮಾಲ್‌‌ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮರು ಸರ್ವೆ ನಡೆಸುವಂತೆ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗಿದೆ. 2011 ರ ಸ್ಥಾಯಿ ಸಮಿತಿ ನೀಡಿದ ವರದಿಯನ್ನು ಪರಿಗಣಿಸಲಾಗಿದೆ. ಮರು ಸರ್ವೆ ವರದಿ ಬಂದ ಬಳಿಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
 
ಎಷ್ಟೇ ಪ್ರಭಾವಿಗಳಾದರು ಸರಿ. ಯಾರ ಮುಲಾಜಿಗೂ ಒಳಗಾಗುವುದಿಲ್ಲ. ರಾಜುಕಾಲುವೆ ನುಂಗಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇನೆ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಅಮೇರಿಕದಲ್ಲಿ ಭಾರತೀಯ ಬಾಲಕಿ ಸಾವು, ಮಲತಾಯಿ ಬಂಧನ