Select Your Language

Notifications

webdunia
webdunia
webdunia
webdunia

ಪಂಚಾಯಿತಿ ಬಾಗಿಲಿಗೆ ಮುಳ್ಳಿನ ಗಿಡ ಹಚ್ಚಿದ್ದೇಕೆ?

ಪಂಚಾಯಿತಿ ಬಾಗಿಲಿಗೆ ಮುಳ್ಳಿನ ಗಿಡ ಹಚ್ಚಿದ್ದೇಕೆ?
ವಿಜಯಪುರ , ಶುಕ್ರವಾರ, 24 ಮೇ 2019 (16:23 IST)
ಆ ಗ್ರಾಮದ ಜನರು ರೊಚ್ಚಿಗೆದ್ದು ಗ್ರಾಮ ಪಂಚಾಯಿತಿ ಕಚೇರಿ ಬಾಗಿಲಿಗೆ ಮುಳ್ಳಿನ ಕಂಟಿ ಇಟ್ಟು ಪ್ರತಿಭಟನೆ ನಡೆಸಿ, ಬೀಗ ಜಡಿದಿದ್ದಾರೆ.

ನೀರಿಗಾಗಿ ಆಗ್ರಹಿಸಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿವೆ. ಗ್ರಾಮ ಪಂಚಾಯತಿಗೆ ಬೀಗ ಹಾಕಿ, ಮುಳ್ಳಿನ ಕಂಟಿ ಹಚ್ಚಿ ಪ್ರತಿಭಟನೆ ನಡೆಸಲಾಗಿದೆ.

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ಘಟನೆ ನಡೆದಿದೆ.

ಕಳೆದ ಹಲವು ತಿಂಗಳುಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಸ್ಥರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಗ್ರಾಮದ ಎಲ್ಲಾ ಕೊಳವೆ ಬಾವಿಗಳು ಬತ್ತಿದ್ದರಿಂದ ನೀರಿಲ್ಲದೇ ಜನರ ಪರದಾಟ ಮುಂದುವರಿದಿದೆ. ಟ್ಯಾಂಕರ್ ಮೂಲಕ ಕೂಡಾ ನೀರು ಪೂರೈಕೆಯಾಗುತ್ತಿಲ್ಲ ಎಂದು ರೊಚ್ಚಿಗೆದ್ದ ಗ್ರಾಮಸ್ಥರು ವಿನೂತನ ಪ್ರತಿಭಟನಾ ಹಾದಿ ತುಳಿದಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ತ್ರಿಮೂರ್ತಿಗಳಿಗೆ ಟಾಂಗ್ ನೀಡಿದ ಸುಮಲತಾ ಅಭಿಮಾನಿಗಳು