Select Your Language

Notifications

webdunia
webdunia
webdunia
webdunia

ಜೆಡಿಎಸ್ ತ್ರಿಮೂರ್ತಿಗಳಿಗೆ ಟಾಂಗ್ ನೀಡಿದ ಸುಮಲತಾ ಅಭಿಮಾನಿಗಳು

ಜೆಡಿಎಸ್ ತ್ರಿಮೂರ್ತಿಗಳಿಗೆ ಟಾಂಗ್ ನೀಡಿದ ಸುಮಲತಾ ಅಭಿಮಾನಿಗಳು
ಮಂಡ್ಯ , ಶುಕ್ರವಾರ, 24 ಮೇ 2019 (16:19 IST)
ಸುಮಲತಾ ಬೆಂಬಲಿಗರಿಂದ ಜೆಡಿಎಸ್ ನಾಯಕರಿಗೆ ಅಭಿನಂದನೆ ಸಲ್ಲಿಕೆ ಮಾಡಲಾಗುತ್ತಿದೆ. ಅದೂ ವ್ಯಂಗ್ಯವಾಗಿ.

ಮಂಡ್ಯದಲ್ಲಿ ಅಭಿನಂದನಾ ಬ್ಯಾನರ್ ಅಳವಡಿಸಿರುವ ಸುಮಲತಾ ಬೆಂಬಲಿಗರಿಂದ ವ್ಯಂಗ್ಯ, ಟೀಕೆಗಳು ಮುಂದುವರಿದಿವೆ.
ಮಂಡ್ಯದ ನೂರು ಅಡಿ ರಸ್ತೆಯಲ್ಲಿ ಬ್ಯಾನರ್ ಕಟ್ಟಿರುವ ಸುಮಲತಾ ಬೆಂಬಲಿಗರು, ಬ್ಯಾನರ್ ನಲ್ಲಿ  ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, MLC ಕೆ.ಟಿ.ಶ್ರೀಕಂಠೇಗೌಡ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಫೋಟೋ ಹಾಕಿದ್ದಾರೆ. ಸುಮಲತಾ ಅಂಬರೀಷ್ ಗೆಲುವಿಗೆ ಕಾರಣರಾದ ತ್ರಿಮೂರ್ತಿಗಳಗೆ  ಹೃತ್ಪೂರ್ವಕ ಅಭಿನಂದನೆಗಳು ಎಂದು ಬರಹ ಹಾಕಲಾಗಿದೆ.

ಚುನಾವಣೆಗೂ ಮುನ್ನಾ ಸುಮಲತಾ ವಿರುದ್ಧ  ಲಘು ಟೀಕೆ ಮಾಡಿದ್ದ ಡಿ.ಸಿ.ತಮ್ಮಣ್ಣ, ಕೆ.ಟಿ.ಶ್ರೀಕಂಠೇಗೌಡ, ಎಲ್.ಆರ್.ಶಿವರಾಮೇಗೌಡ, ಸುಮಲತಾ ಗೆಲುವಿಗೆ ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದು  ಈ ರೀತಿ ಮಾಡಲಾಗಿದೆ.
ಸುಮಲತಾ ಮನೆಗೆ ಬಂದವರಿಗೆ ಒಂದು ಲೋಟ ನೀರು ಕೊಡುತ್ತಿರಲಿಲ್ಲ ಎಂದಿದ್ದ ತಮ್ಮಣ್ಣ, ಶ್ರೀಕಂಠಗೌಡ ಗೌಡ್ತಿ ಅಲ್ಲ ಅಂತ ಹೇಳಿಕೆ ನೀಡಿದ್ರೆ, ಸುಮಲತಾ ಆಂಧ್ರ ನಾಯ್ಡು, ಸಿನಿಮಾದವರನ್ನು ನಂಬ ಬೇಡಿ ಎಂದಿದ್ದರು ಶಿವರಾಮೇಗೌಡ.

ಈ ಮೂವರ ಹೇಳಿಕೆಗಳಿಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಅವಹೇಳನಕಾರಿ ಹೇಳಿಕೆಗಳಿಂದ ಸುಮಲತಾ ಗೆಲುವಿಗೆ ಸಹಕಾರ ಆಯ್ತು ಎಂದು ಅಭಿನಂದನೆ ಸಲ್ಲಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಗೆ ಹೀನಾಯ ಸೋಲು: ಹೆಚ್.ಕೆ.ಪಾಟೀಲ್ ರಾಜೀನಾಮೆ