Publish Date: Wed, 30 Mar 2022 (19:06 IST)
Updated Date: Wed, 30 Mar 2022 (19:08 IST)
ಮತಾಂಧ ಟಿಪ್ಪು ವಿಚಾರವನ್ನು ಪಠ್ಯದಿಂದ ಕೈಬಿಡಬೇಕು.ಟಿಪ್ಪುಗೆ ಮೈಸೂರು ಹುಲಿ ಬಿರುದು ಕೊಟ್ಟಿದ್ದು ಯಾರು..? ಯಾರು ಯಾತಕ್ಕೆ ಕೊಟ್ರು ಅಂತ ದಾಖಲೆ ಇದ್ರೆ ತೋರಿಸಿ. ನೂರಕ್ಕೆ ತೊಂಬತ್ತರಷ್ಟು ಕೆಟ್ಟ ಕೆಲಸ ಮಾಡಿದವನನ್ನು ಹೇಗೆ ಪಠ್ಯಕ್ಕೆ ಸೇರಿಸ್ತೀರಿ ಅಂತ ಕೊಡಗಿನ ವಿರಾಜಪೇಟೆ ಶಾಸಕ ಕೆ. ಜಿ ಬೊಪಯ್ಯ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಹಲಾಲ್ ಬಾಯ್ಕಾಟ್ ಕುರಿತು ಮಾತನಾಡಿ ಹಲಾಲ್ಗೆ ಬೆಂಬಲಿಸೋದು ಮೂಢನಂಬಿಕೆ. ಪ್ರಾಣಿ ಕೊಂದು ಮಾರಾಟ ಮಾಡೋದಕ್ಕೂ ಧರ್ಮಾಚರಣೆ ತಂದ್ರೆ ಹೇಗೆ.? ಹಲಾಲ್ ಚಿಕನ್ ನಿಷೇಧಕ್ಕೆ ನನ್ನ ಬೆಂಬಲ ಇದೆ ಅಂತ ಕೆ. ಜಿ ಬೋಪಯ್ಯ ಹೇಳಿದ್ದಾರೆ.