Webdunia - Bharat's app for daily news and videos

Install App

ಕಬ್ಬಿನ ಗದ್ದೆಯಲ್ಲಿ ಆತ ಹೆಣವಾಗಿದ್ದು ಏಕೆ?

Webdunia
ಮಂಗಳವಾರ, 25 ಜೂನ್ 2019 (19:18 IST)
ಕಬ್ಬಿನ ಗದ್ದೆಯಲ್ಲಿ ವಯಸ್ಕರನೊಬ್ಬನ ಶವ ಪತ್ತೆಯಾಗಿದ್ದು, ಅದು ಕೊಲೆಮಾಡಿರುವಂತೆ ಕಂಡುಬರುತ್ತಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಚಿಕ್ಕೋಡಿಯ ಐನಾಪೂರ - ಕುಡಚಿ ರಸ್ತೆ ಮಧ್ಯದ ಕಬ್ಬಿನ ಗದ್ದೆಯಲ್ಲಿ  ಕೊಲೆಮಾಡಲಾದ ಶವ ಪತ್ತೆಯಾಗಿದ್ದು ಸುಮಾರು 37 ವಯಸ್ಸಿನ ವ್ಯಕ್ತಿಯ ಶವ ಎಂದು ತಿಳಿದು ಬಂದಿದೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಗ್ರಾಮದ ಹೊರವಲಯದಲ್ಲಿ ವ್ಯಕ್ತಿಯ ಹೊಟ್ಟೆಯನ್ನು ಇರಿದು ಕೊಲೆ ಮಾಡಲಾಗಿದೆ.

ಶವದ ಜೇಬಿಯಲ್ಲಿ ಪ್ಯಾನ್ ಕಾರ್ಡಗೆ ನೀಡಲು ಬೇಕಾದ ದಾಖಲಾತಿಗಳು ಸಿಕ್ಕಿದ್ದು, ಆ ದಾಖಲಾತಿಗಳಲ್ಲಿ ಬಾಗಲಕೋಟ ಜಿಲ್ಲೆಯ ತೇರದಾಳ ತಾಲೂಕಿನ ಹಳಿಂಗಳಿ ಗ್ರಾಮದ ಪಾರೀಸ ಜಿನಪ್ಪ ಜಮಖಂಡಿ (37) ಇವರ ದಾಖಲಾತಿಗಳು ಸಿಕ್ಕಿವೆ. ಈ ಹೆಸರಿನವರಿಗೆ ಸಂಬಂಧ ಪಟ್ಟಂತಹ ಸಂಬಂಧಿಗಳು, ಸ್ಥಳಕ್ಕೆ ಆಗಮಿಸಿ ಶವವನ್ನು ಪರಶೀಲಿಸಿ ಮೃತನನ್ನು  ಪಾರೀಸ ಜಿನಪ್ಪ ಜಮಖಂಡಿ ಎಂದು ಗುರುತಿಸಿದ್ದಾರೆ.

ಸ್ಥಳಕ್ಕೆ ಬೆಳಗಾವಿ ಶ್ವಾನದಳ, ಬೆರಳಚ್ಚು ತಜ್ಞರು ಬಂದು ಪರಿಶೀಲಿಸಿದ್ದಾರೆ. ಅಥಣಿ ಡಿವಾಯ್ಎಸ್ಪಿ ರಾಮಗೊಂಡ ಬಸರಗಿ, ಸಿಪಿಐ ಅಲಿಸಾಬ ಐ.ಬಿ., ಹಾಗೂ ಕಾಗವಾಡ ಪಿಎಸ್ಐ ಹಣಮಂತ ಶಿರಹಟ್ಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸತೀಶ್ ಜಾರಕಿಹೊಳಿ ಮನೆಯಲ್ಲಿ ಇಂದೂ ಮುಂದುವರಿದ ಇಡಿ ಶೋಧ

ಅರ್ಜೆಂಟೀನಾದಲ್ಲಿ ಅಚ್ಚರಿಯ ವಿದ್ಯಮಾನ: ಇದ್ದಕ್ಕಿದ್ದಂತೆ 29 ಕಿ.ಮೀ. ಹಿಂದೆ ಸರಿದ ಕಡಲು.. ಕಾರಣವೇನು Video

ಡಿಕೆ ಶಿವಕುಮಾರ್ ಸರ್ಕಾರ 100 ದಿನದಲ್ಲಿ ಮಾಡಿದ್ದೇನು, ಇಂದು ಘೋಷಣೆ ಮಾಡಲಿರುವ ಯೋಜನೆಗಳೇನು ಇಲ್ಲಿದೆ ವಿವರ

Karnataka Weather: ರಾಜ್ಯದಲ್ಲಿ ಇಂದು ಮಳೆಯಿರಲಿದೆಯೇ ಇಲ್ಲಿದೆ ಹವಾಮಾನ ವರದಿ

ಟಿವಿಕೆ ನೇತೃತ್ವದ ಮೈತ್ರಿಗೆ 'ಜಾತ್ಯತೀತ ಸಾಮಾಜಿಕ ನ್ಯಾಯ ವಿಜಯ ಮೈತ್ರಿಕೂಟ' ಹೆಸರು

ಮುಂದಿನ ಸುದ್ದಿ
Show comments