Select Your Language

Notifications

webdunia
webdunia
webdunia
webdunia

ಕೃಷಿ ಹೊಂಡಕ್ಕೆ ಹಾರಿ ಮೂವರು ಮಕ್ಕಳೊಂದಿಗೆ ತಾಯಿ ಹಾರಿದ್ದಾದ್ರು ಯಾಕೆ?

ಕೃಷಿ ಹೊಂಡಕ್ಕೆ ಹಾರಿ ಮೂವರು ಮಕ್ಕಳೊಂದಿಗೆ ತಾಯಿ ಹಾರಿದ್ದಾದ್ರು ಯಾಕೆ?
ವಿಜಯಪುರ , ಗುರುವಾರ, 16 ಜೂನ್ 2022 (09:13 IST)
ವಿಜಯಪುರ :  ಮೂವರು ಮಕ್ಕಳೊಂದಿಗೆ ತಾಯಿ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ತಿಕೋಟಾ ತಾಲೂಕಿನ ತೊರವಿ ತಾಂಡಾ ನಂ.1ರಲ್ಲಿ ಬುಧವಾರ ಸಂಭವಿಸಿದೆ.
 
ತೊರವಿ ತಾಂಡಾ ನಂ.1ರ ನಿವಾಸಿಗಳಾದ ಅನಿತಾ ಪಿಂಟು ಜಾಧವ (27), ಪ್ರವೀಣ (6), ಸುದೀಪ (4) ಮಮದಿಕಾ (2) ಮೃತಪಟ್ಟವರು.

ತಾಯಿ ಅನಿತಾ ಜಾಧವ್ ತನ್ನ ಮೂವರು ಮಕ್ಕಳನ್ನು ತೋಟದಲ್ಲಿನ ಕೃಷಿ ಹೊಂಡಕ್ಕೆ ಎಸೆದು ತಾನೂ ಅದೇ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲಿಸಿದ್ದು, ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಪ್ಲಾನ್ : ರೋಡ್ ಶೋ, ಸಮಾವೇಶಕ್ಕೆ ಸಿದ್ಧತೆ