ಕಲಬುರಗಿ: ಅಹಮದಾಬಾದ್ನಲ್ಲಿ ನಡೆದ ಏರ್ಇಂಡಿಯಾ ವಿಮಾನ ದುರಂತ ಸಂಬಂ ನಾವೇನು ಪ್ರಧಾನಿ ಮೋದಿ ರಾಜೀನಾಮೆಯನ್ನು ಕೇಳಿದ್ವಾ ಎಂದು ಸಚಿವ ಮಹದೇವಪ್ಪ ಅವರು ಪ್ರಶ್ನೆ ಮಾಡಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ನಡುವಿನ ಪೈಪೋಟಿಯೇ ಕಾರಣ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದರು. ಈ ದುರಂತದಿಂದ ಸರ್ಕಾರಕ್ಕೆಯೇ ನೋವಾಗಿದೆ. ಈ ಘಟನೆ ನಡೆಯ ಬಾರದಿತ್ತು. ಮುಂದೆಂದಿಗೂ ಈ ರೀತಿಯ ದುರಂತ ನಡೆಯ ಬಾರದು ಎಂದರು.
ಈ ಘಟನೆಯಲ್ಲಿ ರಾಜಕೀಯ ಮಾಡುವುದು ಮೂರ್ಖತನ. ಈ ರೀತಿಯ ಘಟನೆಗಳು ಉತ್ತರ ಪ್ರದೇಶದ ಸೇರಿದಂತೆ ಬೇರೆ ಬೇರೆ ಕಡೆ ನಡೆದಿದೆ. ಇದೀಗ ಅಹಮಾದಾಬಾದ್ನಲ್ಲಿ ವಿಮಾನ ದುರಂತ ನಡೆದಿದೆ. ಈ ಸಂಬಂದ ನಾವು ಪ್ರಧಾನಿ ನರೇಂದ್ರ ಮೋದಿಯಲ್ಲಿ ರಾಜೀನಾಮೆಯನ್ನು ಕೇಳಕ್ಕೆ ಆಗುತ್ತಾ. ಗುಜರಾತ್ನ ಗೃಹ ಸಚಿವರಲ್ಲಿ ರಾಜೀನಾಮೆಯನ್ನು ಕೇಳಕ್ಕೆ ಆಗುತ್ತಾ ಎಂದು ಮರು ಪ್ರಶ್ನೆ ಹಾಕಿದರು.