Select Your Language

Notifications

webdunia
webdunia
webdunia
webdunia

ರಾಯಚೂರಿನಲ್ಲಿ ಯುವಕರು ಕಪ್ಪು ಪಟ್ಟಿ ಧರಿಸಿ ಮತ ಚಲಾಯಿಸಿದ್ದೇಕೆ?

ರಾಯಚೂರಿನಲ್ಲಿ ಯುವಕರು ಕಪ್ಪು ಪಟ್ಟಿ ಧರಿಸಿ ಮತ ಚಲಾಯಿಸಿದ್ದೇಕೆ?
ರಾಯಚೂರು , ಮಂಗಳವಾರ, 23 ಏಪ್ರಿಲ್ 2019 (10:03 IST)
ರಾಯಚೂರು : ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ರಾಯಚೂರಿನ ಕೆಲವು ಯುವಕರು ಕಪ್ಪು ಪಟ್ಟಿ ಧರಿಸಿ ಮತ ಚಲಾಯಿಸಿದ್ದಾರೆ.


ರಾಯಚೂರಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಅವರನ್ನು ಕಾಮುಕರು ರೇಪ್ ಮಾಡಿ ಜೀವಂತವಾಗಿ ಸುಟ್ಟು ಕೊಲೆ ಮಾಡಿದ್ದರು. ಮಧು ಪತ್ತಾರ ಸಾವಿನ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಅನೇಕರು ಆಗ್ರಹಿಸಿದ್ದಾರೆ.


ಅದೇರೀತಿ ರಾಯಚೂರಿನ ಕೆಲವು ಯುವಕರು ಶಕ್ತಿನಗರದ ಡಿಎವಿ ಪಬ್ಲಿಕ್ ಶಾಲೆಯಲ್ಲಿನ ಮತ ಕೇಂದ್ರಕ್ಕೆ ಕಪ್ಪು ಪಟ್ಟಿ ಧರಿಸಿ ಬಂದು ಮತ ಚಲಾಯಿಸುವುದರ ಮೂಲಕ ಮಧು ಸಾವಿಗೆ  ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಈ ಬಾರಿ ಮತದಾನ ಮಾಡುವ ಅವಕಾಶ ಜನಾರ್ದನ ರೆಡ್ಡಿಗಿಲ್ಲ. ಕಾರಣವೇನು ಗೊತ್ತಾ?