Select Your Language

Notifications

webdunia
webdunia
webdunia
webdunia

ಸಂಸದ ಪ್ರತಾಪ್ ಸಿಂಹ ಅಭಿಮಾನಿಯೊಬ್ಬ ಪ್ರಕಾಶ್ ರೈಗೆ 9 ರೂಪಾಯಿ ಡಿಡಿ ಕಳುಹಿಸಿದ್ಯಾಕೆ…?

ಸಂಸದ ಪ್ರತಾಪ್ ಸಿಂಹ ಅಭಿಮಾನಿಯೊಬ್ಬ ಪ್ರಕಾಶ್ ರೈಗೆ 9 ರೂಪಾಯಿ ಡಿಡಿ ಕಳುಹಿಸಿದ್ಯಾಕೆ…?
ಮೈಸೂರು , ಮಂಗಳವಾರ, 13 ಮಾರ್ಚ್ 2018 (06:57 IST)
ಮೈಸೂರು : ನಟ ಪ್ರಕಾಶ್ ರೈ ಅವರು ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಾಪ್ ಸಿಂಹ ಅವರ ಅಭಿಮಾನಿಯೊಬ್ಬರು ಪ್ರಕಾಶ್ ರೈ ಅವರಗೆ 9 ರೂ ಗಳ ಡಿಡಿಯೊಂದನ್ನು ಕಳುಹಿಸಿದ್ದಾರೆ.


ಈ ಹಿಂದೆ ಪ್ರತಾಪ್ ಸಿಂಹ ಅವರು ಪ್ರಕಾಶ್ ರೈ ಅವರ ಕುರಿತು ಟ್ವೀಟ್ ಮಾಡಿದ ಹಿನ್ನಲೆಯಲ್ಲಿ ಪ್ರಕಾಶ್ ರೈ ಅವರು ಪ್ರತಾಪ್ ಸಿಂಹ ವಿರುದ್ಧ 1 ರೂ. ಪರಿಹಾರ ಕೇಳಿ ಮೈಸೂರಿನ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆದ ಕಾರಣ  ತಮಿಳು ಚಿತ್ರರಂಗದ ನಿರ್ಮಾಪಕರ ಸಂಘದ ಉಪಾಧ್ಯಕ್ಷರಾಗಿರುವ ಪ್ರಕಾಶ್ ರೈ ಅವರ ಈ ಕಚೇರಿಯ ವಿಳಾಸಕ್ಕೆ ಪ್ರತಾಪ್ ಸಿಂಹ ಅಭಿಮಾನಿ ಸಂದೇಶ್ ಎಂಬುವವರು  9 ರೂ.ಗಳ ಡಿಡಿಯನ್ನು ಕಳುಹಿಸಿದ್ದಾರೆ. ಜೊತೆಗೆ ಒಂದು ಪತ್ರವನ್ನು ಕಳುಹಿಸಿ, ಅದರಲ್ಲಿ,’ ನೀವು ಒಂದು ರುಪಾಯಿ ಕೇಳಿದ್ದೀರಿ. ನಾನು ನಿಮಗೆ 9 ರೂಪಾಯಿ ಕಳುಹಿಸಿದ್ದೇನೆ ತೆಗೆದುಕೊಳ್ಳಿ. ನಿಮ್ಮ ಮೌಲ್ಯ 1 ರೂಪಾಯಿ ಅಷ್ಟೆ ಅಂತಾ ನೀವೇ ಹೇಳಿದ್ದೀರಿ. ಆದರೆ, ನಾನು ಅದನ್ನು ಸ್ಪಲ್ಪ ಹೆಚ್ಚು ಮಾಡಿ 9 ರೂಪಾಯಿ ಕಳುಹಿಸಿದ್ದೇನೆ’ ಎಂದು ಬರೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಕಿಯ ಜತೆ ಸಂಬಂಧವಿಟ್ಟುಕೊಂಡಿದ್ದನ್ನು ಪ್ರಶ್ನಿಸಿದ ಅಮ್ಮನನ್ನೇ ಕೊಂದ ಮಗಳು!