Webdunia - Bharat's app for daily news and videos

Install App

ಸಚಿವ ಪುಟ್ಟರಂಗ ಶೆಟ್ಟಿ ಬಿಸಿಎಂ ವಸತಿ ಶಾಲೆಯ ಮಕ್ಕಳನ್ನು ಕಂಡು ಬೇಸರಗೊಂಡಿದ್ಯಾಕೆ ?

Webdunia
ಶನಿವಾರ, 6 ಅಕ್ಟೋಬರ್ 2018 (14:19 IST)
ತುಮಕೂರು : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಪುಟ್ಟರಂಗ ಶೆಟ್ಟಿ ಹರಿದ ಸಮವಸ್ತ್ರ ಧರಿಸಿದ ಬಿಸಿಎಂ ವಸತಿ ಶಾಲೆಯ ಮಕ್ಕಳನ್ನು ಕಂಡು ತುಂಬಾ ಬೇಸರಗೊಂಡಿದ್ದಾರೆ.


ಶುಕ್ರವಾರ ಸಂಜೆ ಕುಣಿಗಲ್ ಪಟ್ಟಣದಲ್ಲಿರುವ ಬಿಸಿಎಂ ವಸತಿ ಶಾಲೆಗೆ ಸಚಿವ ಪುಟ್ಟರಂಗಶೆಟ್ಟಿ ಭೇಟಿ ನೀಡಿ, ಶಾಲೆಯಲ್ಲಿನ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿಯೋರ್ವ ಹರಿದ ಬಟ್ಟೆ ಹಾಕಿರುವುದನ್ನು ನೋಡಿದ ಸಚಿವರು ಬೇಸರದಿಂದ ಮಕ್ಕಳಿಗೆ ಹರಿದ ಬಟ್ಟೆ ಯಾಕೆ ನೀಡಿದ್ದೀರಿ ಅಂತ ಶಾಲಾ ಉಸ್ತುವಾರಿಯನ್ನು ಪ್ರಶ್ನೆ ಮಾಡಿದ್ದಾರೆ.


ಇಲಾಖೆಯಿಂದ ಸಮವಸ್ತ್ರ ಸರಬರಾಜಾಗಿಲ್ಲದ ಕಾರಣ ಹರಿದ ಬಟ್ಟೆ ಹಾಕಿದ್ದಾನೆ ಎಂದು ಅವರು ಹೇಳದಾಗ ಕೂಡಲೇ ಸಮವಸ್ತ್ರ ಖರೀದಿಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ. ಇದೇ ವೇಳೆ ಶಾಲೆಯಲ್ಲಿ ಗ್ರಂಥಾಲಯ ಹಾಗೂ ಕಂಪ್ಯೂಟರ್ ಇಲ್ಲದಿದ್ದಕ್ಕೆ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments