Select Your Language

Notifications

webdunia
webdunia
webdunia
webdunia

ರಾಜಕೀಯ ನಾಯಕರಿಂದ ಕಾನೂನು ಉಲ್ಲಂಘನೆ ; ಬುಲೆಟ್ ನಲ್ಲಿ ಟ್ರಿಪಲ್ ರೈಡ್ ಸಚಿವ ಜಮೀರ್ ಅಹಮದ್

ರಾಜಕೀಯ ನಾಯಕರಿಂದ ಕಾನೂನು ಉಲ್ಲಂಘನೆ ; ಬುಲೆಟ್ ನಲ್ಲಿ ಟ್ರಿಪಲ್ ರೈಡ್ ಸಚಿವ ಜಮೀರ್ ಅಹಮದ್
ತುಮಕೂರು , ಶನಿವಾರ, 29 ಸೆಪ್ಟಂಬರ್ 2018 (11:50 IST)
ತುಮಕೂರು : ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮದ್ ಹಾಗೂ ಕುಣಿಗಲ್ ಶಾಸಕರು ಕಾನೂನನ್ನು ಉಲ್ಲಂಘನೆ ಮಾಡಿದ್ದು, ಸಚಿವರ ಈ ವರ್ತನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.


ಹೌದು. ಇಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮದ್ ಅವರು ತಮ್ಮ ಸಂಬಂಧಿಕರ ಮದ್ವೆಗೆ ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣಕ್ಕೆ ಆಗಮಿಸಿದ್ದಾರೆ. ಈ ವೇಳೆ ಸಚಿವರು ಹಾಗೂ ಶಾಸಕ ಡಾ.ರಂಗನಾಥ ಅವರು ತಮ್ಮ ಬೆಂಬಲಿಗನ ಜೊತೆಗೆ ಜಮೀರ್ ಬುಲೆಟ್ ನಲ್ಲಿ ಹೆಲ್ಮೆಟ್ ನಲ್ಲಿ ಟ್ರಿಪಲ್ ರೈಡ್ ಮಾಡಿದ್ದಾರೆ.


ಆ ವೇಳೆ ಸ್ಥಳದಲ್ಲಿದ್ದ ಪೋಲಿಸರು ಸಚಿವರ ಹಾಗೂ ಶಾಸಕರ ವರ್ತನೆಯನ್ನು ನೋಡಿದರು ಕೂಡ ಸುಮ್ಮನಾಗಿದ್ದರು. ಸಚಿವರು ಹಾಗೂ ಶಾಸಕರ ಈ ವರ್ತನೆ ಕಂಡು  ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅಲ್ಲದೇ ಕಾನೂನಿಗೆ ತಲೆಬಾಗಬೇಕಾಗಿದ್ದ ಸಚಿವರೇ ಈ ರೀತಿ ನಡೆದುಕೊಂಡರೆ ಇನ್ನು ಜನಸಾಮಾನ್ಯರ ಕಥೆ ಏನು ಎಂಬ ಪ್ರಶ್ನೆ ಇದೀಗ ಎಲ್ಲಾ ಕಡೆ ಕೇಳಿಬರುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜಗತ್ತಿನ ಅತೀ ದುಬಾರಿ ಚಪ್ಪಲಿ! ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!