ಅರವಿಂದ್ ಕಣ್ಣೀರಿಟ್ಟಿದ್ದಾದ್ರು ಯಾಕೆ?
ನಿಧಿ ಜೊತೆ ಅರವಿಂದ್ ನಡೆದುಕೊಂಡ ರೀತಿ ಸರಿಯಿಲ್ಲ ಎಂದ ದಿವ್ಯಾ ಉರುಡುಗ: ಕಣ್ಣೀರಿಟ್ಟ ಅರವಿಂದ್..!
Publish Date: Fri, 02 Jul 2021 (07:00 IST)
Updated Date: Fri, 02 Jul 2021 (07:10 IST)
BIGBOSS 8: ದಿವ್ಯಾ ಉರುಡುಗ ಕೊನೆಗೂ ಸ್ನೇಹಿತ ಅರವಿಂದ್ ಅವರ ಜೊತೆ ನಿಧಿ ಸುಬ್ಬಯ್ಯ ಅವರ ವಿಷಯವನ್ನು ಮಾತನಾಡಿದ್ದಾರೆ
.
ಅದು ಸಹ ಸೂರ್ಯ ಸೇನೆ ತಂಡದ ಎದುರು ಅರವಿಂದ್ ಅವರು ನಿಧಿ ಸುಬ್ಬಯ್ಯ ಅವರಿಗೆ ಆ ಪದವನ್ನು ಬಳಸಿದ್ದು ತಪ್ಪು ಎಂದಿದ್ದಾರೆ. ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ ಅರವಿಂದ್ ಅವರ ವಹಿಸಿದರಾದರೂ ದಿವ್ಯಾ ಉರುಡುಗ ಮಾತ್ರ ಅರವಿಂದ್ ಅವರನ್ನು ಮಾಡಿದ್ದು ಸರಿಯಲ್ಲ ಎಂದಿದ್ದಾರೆ.
ಟಾಸ್ಕ್ ಆಡುವಾಗ ನಿಧಿ ಸುಬ್ಬಯ್ಯ ಅವರ ಜೊತೆ ಅರವಿಂದ್ ನಡೆದುಕೊಂಡ ರೀತಿ ಹಾಗೂ ಬಳಕೆ ಮಾಡಿದ ಆ ಪದದ ಬಗ್ಗೆ ದಿವ್ಯಾ ಉರುಡುಗ ಅವರಿಗೂ ಅಸಮಾಧಾನವಿದೆ.