Select Your Language

Notifications

webdunia
webdunia
webdunia
webdunia

ಒಂದೇ ಕುಟುಂಬದ ಮೂವರು ಮಹಿಳೆಯರು ಕೆರೆಗೆ ಹಾರಿದ್ದಾದ್ರು ಯಾಕೆ?

ಒಂದೇ ಕುಟುಂಬದ ಮೂವರು ಮಹಿಳೆಯರು ಕೆರೆಗೆ ಹಾರಿದ್ದಾದ್ರು ಯಾಕೆ?
ರಾಮನಗರ , ಸೋಮವಾರ, 6 ಜೂನ್ 2022 (14:24 IST)
ರಾಮನಗರ : ಕೌಟುಂಬಿಕ ಕಲಹದ ಹಿನ್ನೆಲೆ ಮೂವರು ಮಹಿಳೆಯರು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಾಗಡಿಯಲ್ಲಿ ನಡೆದಿದೆ.

ಮಾಗಡಿ ಟೌನ್ನ ಗೌರಮ್ಮನ ಕೆರೆಗೆ ಮೂರು ಮಹಿಳೆಯರು ಹಾರಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಇಬ್ಬರು ಮಹಿಳೆಯರು ಅಪಾಯದಿಂದ ಪಾರಾಗಿದ್ದಾರೆ ಮೃತ ಮಹಿಳೆಯನ್ನು ಅಜ್ಜಿ ಶಾಂತಾ ಭಾಯಿ(50) ಎಂದು ಗುರುತಿಸಲಾಗಿದೆ.

ಇವರು ಮಾಗಡಿ ಟೌನ್ನ ನೇಯಿಗೆ ಬೀದಿ ನಿವಾಸಿಯಾಗಿದ್ದರು.  ಭಾನುವಾರ ಈ ಮೂರು ಮಹಿಳೆಯರು ಕೆರೆಗೆ ಹಾರಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ.

ತಕ್ಷಣ ಉಷಾ ಭಾಯಿ ಹಾಗೂ ನಿರ್ಮಲಾ ಭಾಯಿಯನ್ನು ರಕ್ಷಣೆ ಮಾಡಿದ್ದು, ಶಾಂತಾಭಾಯಿ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಮಾಡಿದ್ದು, ಇವರು ಒಂದೇ ಕುಟುಂಬದ ಮಹಿಳೆಯರು ಎಂಬುದು ತಿಳಿದುಬಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಬ್ರಾಹಿಂಗೆ ಮರ್ಯಾದೆ ಇಲ್ಲ: ಸಿದ್ದರಾಮಯ್ಯ