Select Your Language

Notifications

webdunia
webdunia
webdunia
Saturday, 19 April 2025
webdunia

ಸಚಿವ ಸಾ.ರಾ.ಮಹೇಶ್ ಸವಾಲ್ ಹಾಕಿದ್ದು ಯಾರಿಗೆ ಗೊತ್ತಾ?

ದಸರಾ
ಮೈಸೂರು , ಭಾನುವಾರ, 21 ಅಕ್ಟೋಬರ್ 2018 (16:14 IST)
ತನ್ವೀರ್ ಸೇಠ್ ವಿರುದ್ಧ ಸಚಿವ ಸಾ.ರಾ.ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ತನ್ವಿರ್ ಸೇಠ್ ಸಚಿವರಾಗಿದ್ದ ವೇಳೆ ಎಷ್ಟು ದಸರಾ ಪಾಸ್ ಗಳನ್ನು ವಿತರಣೆ ಮಾಡಿದ್ದರು ಎಂಬ ಬಗ್ಗೆ ತಕ್ಷಣವೇ ಶ್ವೇತಪತ್ರ ಹೊರಡಿಸಬೇಕೆಂದು ಸವಾಲು ಹಾಕಿದ್ದಾರೆ.

ಶಾಸಕ ತನ್ವೀರ್ ಸೇಠ್, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಹಾಗೂ ಸಿಎಂ ವಿರುದ್ಧ ಪಾಸ್ ಕುರಿತು ಟೀಕೆ ಮಾಡಿದ್ದರು.

ಮೈಸೂರು ಅರಮನೆ ಆವರಣದಲ್ಲಿ ದಸರಾ ಆನೆಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಸಚಿವ ಸಾ.ರಾ.ಮಹೇಶ್, ತನ್ವೀರ್ ಸೇಠ್ ಈ ಹಿಂದೆ ಯಾರು ಯಾರಿಗೆ ಎಷ್ಟೆಷ್ಟು ಪಾಸ್ ಗಳನ್ನು ನೀಡಿದ್ದರು ಎಂಬುದನ್ನು ದಾಖಲೆ ಸಹಿತ ಮಾಹಿತಿ ನೀಡಲಿ ಎಂದಿದ್ದಾರೆ.

ಈ ಹಿಂದೆ ಯಾವ ರೀತಿ ಪಾಸ್ ಗಳನ್ನು ನೀಡಲಾಗುತ್ತಿತ್ತೋ ಅದೇ ರೀತಿ ಪಾಸ್ ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಬಂಡೆಪ್ಪ ಪ್ರವಾಸ ಕೈಗೊಂಡಿದ್ದು ಹೇಗೆ ಗೊತ್ತಾ?