Select Your Language

Notifications

webdunia
webdunia
webdunia
webdunia

ಬಿಜೆಪಿ ಪಾದಯಾತ್ರೆ ಬಗ್ಗೆ ಗುರ್ ಅಂತಿದ್ದ ಕುಮಾರಸ್ವಾಮಿ ಮುನಿಸು ತಣ್ಣಗಾಗಿಸಿದ್ದು ಯಾರು ಗೊತ್ತಾ

BJP Padayatra

Krishnaveni K

ಬೆಂಗಳೂರು , ಶನಿವಾರ, 3 ಆಗಸ್ಟ್ 2024 (17:37 IST)
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದ ಬಿಜೆಪಿ ವಿರುದ್ಧ ದೋಸ್ತಿ ಪಕ್ಷ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಮೊದಲು ಸಿಟ್ಟಾಗಿದ್ದರು. ಬಳಿಕ ಅವರನ್ನು ತಣ್ಣಗಾಗಿಸಿದ್ದು ಯಾರು ಗೊತ್ತಾ?

ಬಿಜೆಪಿ ನೇತೃತ್ವದ ಪಾದಯಾತ್ರೆಗೆ ತಮ್ಮ ಕುಟುಂಬದ ಬದ್ಧ ಎದುರಾಳಿ ಪ್ರೀತಂ ಗೌಡರನ್ನು ಆಹ್ವಾನಿಸಿದ್ದು ಕುಮಾರಸ್ವಾಮಿ ಸಿಟ್ಟಿಗೆ ಕಾರಣವಾಗಿತ್ತು. ಹೀಗಾಗಿ ಬಹಿರಂಗವಾಗಿಯೇ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಬಿಜೆಪಿ ನಾಯಕರು ಕುಮಾರಸ್ವಾಮಿ ಜೊತೆ ಸಂಧಾನ ಸಭೆ ನಡೆಸಿದ್ದರು. ಬಳಿಕ ಜೆಡಿಎಸ್ ಪಾದಯಾತ್ರೆಯಲ್ಲಿ ಭಾಗಿಯಾಗಲು ಒಪ್ಪಿತ್ತು.

ಆದರೆ ಕುಮಾರಸ್ವಾಮಿಯ ಸಿಟ್ಟು ತಣ್ಣಗಾಗಿಸಿದ್ದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯಂತೆ. ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್, ಪ್ರಲ್ಹಾದ್ ಜೋಶಿ, ಬಿ ವೈ ವಿಜಯೇಂದ್ರ ಖುದ್ದಾಗಿ ಕುಮಾರಸ್ವಾಮಿ ಜೊತೆ ಸಭೆ ನಡೆಸಿ ಅವರ ಮನವೊಲಿಸಿದ್ದರು.

ಈ ಪೈಕಿ ಪ್ರಲ್ಹಾದ್ ಜೋಶಿ ಮಾತಿಗೆ ಕುಮಾರಸ್ವಾಮಿ ಬೆಲೆ ಕೊಟ್ಟು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡರು ಎನ್ನಲಾಗಿದೆ. ಹೀಗಾಗಿಯೇ ಇಂದು ಪಾದಯಾತ್ರೆಗೆ ಚಾಲನೆ ಸಂದರ್ಭದಲ್ಲಿ ಮಾತನಾಡುವಾಗ ಜೋಶಿಯನ್ನು ಕುಮಾರಸ್ವಾಮಿ ಹಾಡಿ ಹೊಗಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ವಯನಾಡು ಸಂತ್ರಸ್ತರಿಗೆ ತಿಂಗಳ ಸಂಭಾವನೆ ನೀಡಿದ ಸಿಪಿಐ(ಎಂ) ಶಾಸಕರು