ಕೆಎನ್ ರಾಜಣ್ಣ ತಲೆದಂಡಕ್ಕೆ ರಿಯಲ್ ಕಾರಣ ಇಲ್ಲಿದೆ: ಇವರಿಂದಲೇ ಎಲ್ಲಾ ಆಗಿದ್ದು

Krishnaveni K
ಮಂಗಳವಾರ, 12 ಆಗಸ್ಟ್ 2025 (09:26 IST)
Photo Credit: Instagram
ಬೆಂಗಳೂರು: ಸಹಕಾರ ಸಚಿವರಾಗಿದ್ದ ಕೆಎನ್ ರಾಜಣ್ಣರನ್ನು ದಿಡೀರ್ ಸಂಪುಟದಿಂದ ಕಿತ್ತು ಹಾಕಲಾಗಿದೆ. ಅಷ್ಟಕ್ಕೂ ಕೆಎನ್ ರಾಜಣ್ಣ ರಾಜೀನಾಮೆಗೆ ನಿಜ ಕಾರಣ ಯಾರು, ಯಾಕೆ ಇಲ್ಲಿದೆ ವಿವರ.

ಕೆಎನ್ ರಾಜಣ್ಣ ಮೊದಲಿನಿಂದಲೂ ನೇರ ನುಡಿಯಿಂದ ನಿಷ್ಠುರಕ್ಕೊಳಗಾದವರು. ರಾಜ್ಯ ಕಾಂಗ್ರೆಸ್ ನಾಯಕರಿಗೆ ವಿವಾದಾತ್ಮಕ ಹೇಳಿಕೆಗಳಿಂದ ಮಗ್ಗಲ ಮುಳ್ಳಾಗಿದ್ದರು. ಹೀಗಾಗಿ ಈಗ ಕೆಎನ್ ರಾಜಣ್ಣ ತಲೆದಂಡದಿಂದ ಕೆಲವರಿಗೆ ಒಳಗೊಳಗೇ ಖುಷಿಯಾದರೆ ಮತ್ತೆ ಕೆಲವರಿಗೆ ನಡುಕ ಶುರುವಾಗಿದೆ.

ರಾಜ್ಯ ರಾಜಕಾರಣದ ಬಗ್ಗೆ ಕೆಎನ್ ರಾಜಣ್ಣ ಹೇಳಿಕೆ ನೀಡಿದಾಗಲೆಲ್ಲಾ ಕೇವಲ ಎಚ್ಚರಿಕೆಯಿಂದಷ್ಟೇ ಹೈಕಮಾಂಡ್ ಸುಮ್ಮನಾಗಿತ್ತು. ಆದರೆ ಯಾವಾಗ ರಾಹುಲ್ ಗಾಂಧಿ ನೇತೃತ್ವದಲ್ಲಿ ಮತಗಳ್ಳತನ ಪ್ರತಿಭಟನೆ ಬಗ್ಗೆಯೇ ಟೀಕಿಸಿದರೋ ಅದು ಹೈಕಮಾಂಡ್ ಕೆರಳಿಸಿತ್ತು.

ಕೆಎನ್ ರಾಜಣ್ಣ ಮಾತನಾಡಿದ್ದ ವಿಡಿಯೋ, ಹೇಳಿಕೆಗಳು ನೇರವಾಗಿ ರಾಹುಲ್ ಗಾಂಧಿ ಕಚೇರಿ ತಲುಪಿದ್ದವು. ತಮ್ಮ ಬಗ್ಗೆಯೇ ಟೀಕೆ ಮಾಡಿದ ಕೆಎನ್ ರಾಜಣ್ಣ ಹೇಳಿಕೆಯನ್ನು ರಾಹುಲ್ ಇಂಗ್ಲಿಷ್ ಗೆ ಭಾಷಾಂತರಿಸಿಕೊಂಡು ಏನು ಹೇಳಿದ್ದಾರೆ ಎಂದು ತಿಳಿದುಕೊಂಡಿದ್ದರು. ಕೆಎನ್ ರಾಜಣ್ಣ ಹೇಳಿದ್ದು ಕೇಳಿದ ಮೇಲೆ ರಾಹುಲ್ ಗಾಂಧಿ ವಿಪರೀತ ಸಿಟ್ಟಾಗಿದ್ದರು.

ತಕ್ಷಣವೇ ರಾಜಣ್ಣನನ್ನು ಪಕ್ಷದಿಂದಲೇ ವಜಾಗೊಳಿಸಲು ಸೂಚಿಸಿದ್ದರು. ಆದರೆ ಈ ಸಮಯದಲ್ಲಿ ಪಕ್ಷದಿಂದ ಕಿತ್ತು ಹಾಕುವುದು ಒಳ್ಳೆಯದಲ್ಲ ಎಂದು ಹಿರಿಯರು ಸಲಹೆ ನೀಡಿದ ಮೇಲೆ ಸಚಿವ ಸಂಪುಟದಿಂದ ಕಿತ್ತು ಹಾಕಲು ಹೇಳಿದರು. ರಾಹುಲ್ ಸೂಚನೆಯಂತೆ ನಿನ್ನೆಯೇ ರಾಜೀನಾಮೆ ನೀಡಲು ಸೂಚಿಸಲಾಗಿತ್ತು. ಒಂದು ವೇಳೆ ರಾಜೀನಾಮೆಗೆ ನಿರಾಕರಿಸಿದರೆ ಪಕ್ಷದಿಂದಲೇ ಕಿತ್ತು ಹಾಕಲು ಆರ್ಡರ್ ಮಾಡಿದ್ದರು. ಅದರಂತೆ ರಾಜಣ್ಣ ರಾಜೀನಾಮೆಗೆ ಸೂಚಿಸಲಾಯಿತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರತಿ ವರ್ಷದಂತೆ ಈ ಬಾರಿಯೂ ದೀಪಾವಳಿಗೆ ಈ ಕೆಲಸ ಮಾಡಲು ಮರೆಯದ ನರೇಂದ್ರ ಮೋದಿ

ದೀಪೋತ್ಸವ ಅಯೋಧ್ಯೆಗೆ ಹೊಸ ಜಾಗತಿಕ ಗುರುತನ್ನು ನೀಡಿದೆ: ಯೋಗಿ ಆದಿತ್ಯನಾಥ್‌

ನನ್ನ ಮಗನನ್ನು ಸ್ವಯಂಸೇವಕನಾಗಿ ಮಾಡುತ್ತೇನೆಯೇ ವಿನಾ ಶಾಸಕನಾಗಿಯಲ್ಲ: ಸುನಿಲ್ ಕುಮಾರ್ ಕೌಂಟರ್‌

ಪಟಾಕಿ ಹಚ್ಚಲು ಸಿದ್ಧತೆ ನಡೆಸುತ್ತಿರುವಾಗಲೇ ದೆಹಲಿ ಮಂದಿಗೆ ಬಿಗ್ ಶಾಕ್‌

ರಷ್ಯಾದಿಂದ ಭಾರತ ತೈಲ ಖರೀದಿ ವಿಚಾರ: ಮತ್ತೆ ದುಬಾರಿ ಸುಂಕದ ಬೆದರಿಕೆ ನೀಡಿದ ಡೊನಾಲ್ಡ್‌ ಟ್ರಂಪ್‌

ಮುಂದಿನ ಸುದ್ದಿ
Show comments