Webdunia - Bharat's app for daily news and videos

Install App

ಬಿಎಸ್ಪಿಯಿಂದ ಯಾರೇ ಹೊರ ಹೋದರೂ ಕಸ, ಕಸದ ಬುಟ್ಟಿ ಸೇರಿದಂತೆ

Webdunia
ಮಂಗಳವಾರ, 3 ಆಗಸ್ಟ್ 2021 (19:39 IST)
ಬಿಎಸ್ಪಿ ಪಕ್ಷದಿಂದ ಯಾರೇ ಹೊರ ಹೋದರು ಕಸದ ಬುಟ್ಟಿಗೆ ಸೇರಿದಂತೆ ಎಂದು ಬಿಎಸ್​ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಕೊಳ್ಳೇಗಾಲ ಶಾಸಕ ಎನ್.ಮಹೇಶ್  ವಿರುದ್ದ ಹರಿಹಾಯ್ದರು. ಬಿಎಸ್ಪಿ ಪಕ್ಷದಿಂದ ಯಾರೇ ಹೊರ ಹೋದರೂ ಕಸ, ಕಸದ ಬುಟ್ಟಿಗೆ ಸೇರಿದೆ ಎಂಬ ಕಾನ್ಷಿರಾಂ ಅವರ ವಾಕ್ಯವನ್ನು ಮಹೇಶ್​ ಅವರು ಉದ್ಧರಿಸುತ್ತಿದ್ದರು, ಈಗ ಅವರೇ ಆ ವಾಕ್ಯಕ್ಕೆ ಉದಾಹರಣೆಯಾಗಿ ನಿಂತಿರುವುದು ದೊಡ್ಡ ದುರಂತ.
2019ರಲ್ಲಿ ತಾಪಂ ಸದಸ್ಯರೊಬ್ಬರು ಕಾಂಗ್ರೆಸ್​ಗೆ ಪಕ್ಷಾಂತರಗೊಂಡಿದ್ದ ವೇಳೆ ಆತನಿಗೆ ಇದೇ ಎನ್.ಮಹೇಶ್  ಸವಾಲು ಹಾಕಿ ರಾಜೀನಾಮೆ ಕೊಟ್ಟು ಸೇರಿಕೊಂಡ ಪಕ್ಷದಡಿ ಚುನಾವಣೆ ಎದುರಿಸಲಿ ಎಂದು ಹೇಳಿದ್ದರು. ಈಗ ಅವರೇ ಈ ಚಾಲೆಂಜ್ ಸ್ವೀಕರಿಸಬೇಕು, ಪ್ರಸ್ತುತ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಗೆದ್ದು ತೋರಿಸಲಿ ಎಂದು ಸವಾಲು​​ ಹಾಕಿದರು. ಮಹೇಶ್ ಪಕ್ಷ ಬದಲಾವಣೆಯಿಂದ ಬಿಎಸ್​ಪಿ ಶಕ್ತಿ ಕುಂದುವುದಿಲ್ಲ. ಅವರಿಲ್ಲದಿದ್ದಾಗಲೇ ಗ್ರಾಪಂ ಚುನಾವಣೆಯಲ್ಲಿ ಹೆಚ್ಚು ಮಂದಿ ಗೆದ್ದಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಗತವಾದ ಟೀಕೆ ಮಾಡುತ್ತಿರುವವರು ನಮ್ಮ ಪಕ್ಷದ ಕಾರ್ಯಕರ್ತರಲ್ಲ. ಕಳೆದ ವರ್ಷವೇ ವ್ಯಕ್ತಿಗತ ಟೀಕೆ ಮಾಡಬಾರದೆಂದು ಕಾರ್ಯಕರ್ತರಿಗೆ ಸೂಚಿಸಿದ್ದೇನೆ. ಇನ್ನು ಎನ್‌. ಮಹೇಶ್ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪಕ್ಷ ನಿಷ್ಠೆ, ಹೈ ಕಮಾಂಡ್ ಆದೇಶ ಪಾಲನೆಯನ್ನು ನೋಡಿ ಕಲಿಯಲಿ. ಅವರು ಹೈ ಕಮಾಂಡ್ ಸೂಚನೆ ಪಾಲಿಸಿದ್ದರೇ ಪಕ್ಷ ಬಿಡುವ ಅಗತ್ಯವೇ ಇರಲಿಲ್ಲ. ಮಠಾಧೀಶರು, ಇಡೀ ಸಮುದಾಯ ಅವರ ಬೆಂಬಲಕ್ಕೆ ನಿಂತರು ಬಿಎಸ್​ವೈ ರಾಜೀನಾಮೆ ಕೊಟ್ಟರು.ಈ ಪಕ್ಷ ನಿಷ್ಟೆಯನ್ನು ಮಹೇಶ್ ಅವರು ಬಿಜೆಪಿಯಲ್ಲಾದರೂ ತೋರಿಸಲಿ ಎಂದು ವ್ಯಂಗ್ಯವಾಡಿದರು.
bysp

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರೀ ಮಳೆ ಮುನ್ಸೂಚನೆ: ನಾಳೆ ಈ ಭಾಗದ ಶಾಲಾ ಮಕ್ಕಳಿಗೆ ರಜೆ ಘೋಷಣೆ

ಅಯೋಗ್ಯನ ಮಾತು ಕೇಳಿ ಧರ್ಮಸ್ಥಳದ ಪ್ರಕರಣ ಎಸ್‌ಐಟಿಗೆ ವಹಿಸಿದ್ದಾರೆ: ಪ್ರಹ್ಲಾದ ಜೋಶಿ

ರಾಹುಲ್ ಗಾಂಧಿಯಿಂದ ಸಂವಿಧಾನಕ್ಕೆ ಅವಮಾನ: ಪಿನ್ ಟು ಪಿನ್ ಉತ್ತರ ಕೊಟ್ಟ ಚುನಾವಣಾ ಆಯೋಗ

RSS ದೇಶದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದೆ, ಇದು ಭಾರತದ ತಾಲಿಬಾನ್: ಬಿಕೆ ಹರಿಪ್ರಸಾದ್

ಸಿದ್ದರಾಮಯ್ಯ ಕಮ್ಯೂನಿಸ್ಟ್‌ಗಳಿಗೆ ರೆಡ್ ಕಾರ್ಪೆಟ್ ಹಾಸಿದ್ದೆ ಇದಕ್ಕೆಲ್ಲ ಕಾರಣ: ಆರ್‌ ಅಶೋಕ್‌

ಮುಂದಿನ ಸುದ್ದಿ
Show comments