Select Your Language

Notifications

webdunia
webdunia
webdunia
webdunia

ಜನರ ಮುಂದೆ ಪದೇ ಪದೇ ಕಣ್ಣೀರಿಡುವ ಸಿಎಂ ನಮಗೆ ಬೇಕಾಗಿಲ್ಲ ಎಂದವರ್ಯಾರು?

ಜನರ ಮುಂದೆ ಪದೇ ಪದೇ ಕಣ್ಣೀರಿಡುವ ಸಿಎಂ ನಮಗೆ ಬೇಕಾಗಿಲ್ಲ ಎಂದವರ್ಯಾರು?
ಯಾದಗಿರಿ , ಭಾನುವಾರ, 21 ಏಪ್ರಿಲ್ 2019 (13:01 IST)
ಯಾದಗಿರಿ : ಜನರ ಮುಂದೆ ಪದೇ ಪದೇ ಕಣ್ಣೀರಿಡುವ ಸಿಎಂ ನಮಗೆ ಬೇಕಾಗಿಲ್ಲ ಎಂದು ಸಿಎಂ ವಿರುದ್ಧ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ವಾಗ್ದಾಳಿ ನಡೆಸಿದ್ದಾರೆ.


ಯಾದಗಿರಿಯಲ್ಲಿ ನಡೆದ ಸೆಲ್ಪಿ ವಿತ್ ಸಂತೋಷ ಎಂಬ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಜನರ ಮುಂದೆ ಪದೇ ಪದೇ ಕಣ್ಣೀರಿಡುವ ಸಿಎಂ ನಮಗೆ ಬೇಕಾಗಿಲ್ಲ, ಹೀಗೆ ಕಣ್ಣೀರಿಡುವ ಸಿಎಂ ಇದ್ದರೆ ದೇಶದಲ್ಲಿ ಏನಾಗುತ್ತದೆ ಎಂಬುದರ ಬಗ್ಗೆ ಪ್ರತಿಯೊಬ್ಬರು ಯೋಚಿಸಬೇಕು  ಎಂದು ಕಿಡಿಕಾರಿದ್ದಾರೆ.


ಕುಮಾರಸ್ವಾಮಿ ಕೈಯಿಂದ ಸಿಎಂ ಹುದ್ದೆ ನಿಭಾಯಿಸಲು ಆಗಲಿಲ್ಲವೆಂದರೆ ಸಿಎಂ ಸ್ಥಾನ ಬಿಟ್ಟು ಬಿಡಲಿ. ನಮಗೆ ದೇಶವನ್ನು ಸುಭದ್ರವಾಗಿ ಕಾಪಾಡುವ ಮೋದಿಯಂತ ನಾಯಕರು ಬೇಕು, ಜನರ ಮುಂದೆ ಪದೇ ಪದೇ ಕಣ್ಣೀರಿಡುವ ಸಿಎಂ ನಮಗೆ ಬೇಕಾಗಿಲ್ಲ ಎಂದು ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿಂಗ್ ಕಮಾಂಡರ್ ಅಭಿನಂದನ್ ರನ್ನು ವರ್ಗಾವಣೆ ಮಾಡಿದ ವಾಯುಪಡೆ