Webdunia - Bharat's app for daily news and videos

Install App

ರಾಜಾರೋಷವಾಗಿ ಮನೆಕಳ್ಳತನ ನಡಿತಿರೋದು ಎಲ್ಲಿ?

Webdunia
ಭಾನುವಾರ, 5 ಮೇ 2019 (18:38 IST)
ರಾಜಾರೋಷವಾಗಿ ಕಳ್ಳರು ಮನೆಗಳನ್ನು ದರೋಡೆ ಮಾಡುತ್ತಿದ್ದಾರೆ. ಇದು ಜನರ ನಿದ್ರೆ ಹಾರಿಹೋಗುವಂತೆ ಮಾಡುತ್ತಿದೆ.

ತುಮಕೂರು‌ ಜಿಲ್ಲೆ ಗುಬ್ಬಿ ಪಟ್ಟಣದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಕಳ್ಳರ ಕರಾಮತ್ತು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹೆರೂರು ಗ್ರಾಮದ ರಾಜಣ್ಣ ಎಂಬುವರ ಮನೆ ದರೋಡೆ ಮಾಡಿದ್ದಾರೆ ಕಳ್ಳರು. ಇಬ್ಬರು ಮುಸುಕುಧಾರಿ ಕಳ್ಳರು ಬೈಕ್ ನಲ್ಲಿ ಬಂದು ದರೋಡೆ ಮಾಡಿದ್ದಾರೆ. ಎಲ್ ಸಿ ಡಿ ಟಿವಿ, 75 ಸಾವಿರ ರೂ. ದರೋಡೆ ಮಾಡಿದ್ದಾರೆ.  

ಅದೇ ಗ್ರಾಮದ ಶೇಖರ್ ಎಂಬುವರ  ಮನೆ ಬೀಗ ಮುರಿದು ಕನ್ನ ಹಾಕಿದ್ದಾರೆ. ತಡರಾತ್ರಿ ಕಿಟ್ಟದ ಗುಪ್ಪೆ ರಸ್ತೆಯಲ್ಲಿ 8 ಚೀಲ ಅಡಿಕೆ ಕದ್ದಿದ್ದಾರೆ ಖದೀಮರು. ಶಿವಣ್ಣ ಎಂಬುವರಿಗೆ ಸೇರಿದ ಅಡಿಕೆ‌ ಚೀಲಗಳನ್ನು ಕದ್ದಿದ್ದಾರೆ.

ಕಳೆದ ಒಂದು ವಾರದಿಂದ ನಿರಂತರವಾಗಿ ನಡೆಯುತ್ತಿರುವ ಕಳ್ಳತನ ಈ ಭಾಗದ ಜನರು ರಾತ್ರಿ ನಿದ್ರೆ ಮಾಡದಂತೆ ಮಾಡಿದೆ. ಕಳ್ಳರ ಹಾವಳಿಯಿಂದ ಸಾರ್ವಜನಿಕರಲ್ಲಿ‌ ಆತಂಕ ಎದುರಾಗಿದೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments