Select Your Language

Notifications

webdunia
webdunia
webdunia
webdunia

ಅಬಕಾರಿ ಇಲಾಖೆಗೂ 'ಜಯಲಕ್ಷ್ಮೀ' ಹೆಸರಿಗೂ ಏನು ಸಂಬಂಧ?: ರೇಣುಕಾಚಾರ್ಯ ಗರಂ

ಅಬಕಾರಿ ಇಲಾಖೆ
ಬೆಂಗಳೂರು , ಮಂಗಳವಾರ, 20 ಡಿಸೆಂಬರ್ 2016 (14:14 IST)
ಅಬಕಾರಿ ಇಲಾಖೆಗೂ ಜಯಲಕ್ಷ್ಮೀ ಎಂಬ ಹೆಸರಿಗೂ ಏನು ಸಂಬಂಧ ಎಂದು ಕೇಳಿದ ಮಾಧ್ಯಮದವರ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಚಿವ ರೇಣುಕಾಚಾರ್ಯ, ಹೀಗೆಲ್ಲಾ ಪ್ರಶ್ನಿಸಿಬೇಡಿ, ನಾನು ಬರಗಾಲ ವೀಕ್ಷಣೆಗೆ ಬಂದಿದ್ದೇನೆ. ಗೌರವಯುತವಾದ ಪ್ರಶ್ನೆ ಕೇಳಿ ಉತ್ತರ ಪಡೆಯಿರಿ ಎಂದು ಗರಂ ಆದರು. 
ಬೆಂಗಳೂರಿನ ಮಲ್ಲೆಶ್ವರಂನಲ್ಲಿರು ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಎಚ್.ವೈ.ಮೇಟಿ ಮಾಡಿದ ತಪ್ಪಿಗೆ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಇದಕ್ಕಿತ ಹೆಚ್ಚಿಗೆ ಏನು ಹೇಳಲಾರೆ ಎಂದರು. 
 
ಸಿಎಂ ವಿರುದ್ಧ ವಾಗ್ದಾಳಿ....
 
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಾಗೂ ಅಧಿಕಾರಿಗಳು ನಿದ್ರಾವಸ್ಥೆಯಲ್ಲಿದ್ದಾರೆ. ಇದರಿಂದ ಅವರು ಇನ್ನು ಹೊರಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡುವುದನ್ನು ನಿಲ್ಲಿಸಲಿ ಎಂದು ವಾಗ್ದಾಳಿ ನಡೆಸಿದರು. 
 
ಸಚಿವರು, ಶಾಸಕರು ಮೋಜು ಮಸ್ತಿಯಲ್ಲಿದ್ದಾರೆ.....
 
ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳ ರಚನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲಹರಣ ಮಾಡಿದ್ದು, ರೈತರ ಸಮಸ್ಯೆ ಬಗೆಹರಿಸಲು ನಿರ್ಲಕ್ಷ್ಯ ತೋರಿದ್ದಾರೆ. ಮೋಜು ಮಸ್ತಿಯಲ್ಲಿ ಸಮಯ ಕಳೆಯುತ್ತಿರುವ ಶಾಸಕರು ಹಾಗೂ ಸಚಿವರು ಬರಗಾಲದ ಕುರಿತು ವರದಿ ನೀಡಿಲ್ಲ ಎಂದು ಮಾಜಿ ಸಚಿವ ರೇಣುಕಾಚಾರ್ಯ ಗಂಭೀರವಾಗಿ ಆರೋಪಿಸಿದರು. 
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸದ್ಯದಲ್ಲಿಯೇ ಸಚಿವರು, ಎಂಎಲ್‌ಸಿಗಳ ಬಣ್ಣ ಬಯಲು: ಯಡ್ಡಿ ಭವಿಷ್ಯ