Select Your Language

Notifications

webdunia
webdunia
webdunia
webdunia

ಯಾವ ಆಯುಧದಿಂದ ನಡೆಯಿತು ಆ ಯುವಕನ ಕೊಲೆ?

ಯಾವ ಆಯುಧದಿಂದ ನಡೆಯಿತು ಆ ಯುವಕನ ಕೊಲೆ?
ಮಂಗಳೂರು , ಶನಿವಾರ, 18 ಮೇ 2019 (15:22 IST)
ಕೊಲೆಗೈದ ಸ್ಥಿತಿಯಲ್ಲಿ ಯುವಕನ ಶವ ಬೆಳಗ್ಗೆ ಪತ್ತೆಯಾಗಿದೆ.

ಮಂಗಳೂರು ನಗರದ ಹೊರ ವಲಯದ ಮೂಡುಬಿದಿರೆ ಸಮೀಪದ ಮಿಜಾರು ದಡ್ಡಿ ಎಂಬಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದರಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಮಿಜಾರು ದಡ್ಡಿ ನಿವಾಸಿ ನವೀನ್ ಕುಮಾರ್ (27) ಮೃತ ಯುವಕ. ತಲೆಯ ಭಾಗದಲ್ಲಿ ಗಂಭೀರ ಗಾಯ ಕಂಡು ಬಂದಿದೆ. ಹರಿತ ಆಯುಧ ಅಥವಾ ಮರದ ತುಂಡಿನಿಂದ ಹೊಡೆದು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೃತದೇಹ ದೊರೆತ ಸ್ಥಳದಲ್ಲಿ ಬಿಯರ್ ಬಾಟಲಿ ಪತ್ತೆಯಾಗಿದೆ. ಕೊಲೆ ಮಾಡುವ ಉದ್ದೇಶದಿಂದ ಆತನನ್ನು ದಡ್ಡಿ ಪ್ರದೇಶಕ್ಕೆ ಕರೆಸಿಕೊಂಡು ಯಾವುದೋ ಕಾರಣಕ್ಕೆ ಹೊಡೆದು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಬಜ್ಪೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

‘RSS, BJP ಮಹಾತ್ಮ ಗಾಂಧಿ ವಿರೋಧಿಗಳು’