Select Your Language

Notifications

webdunia
webdunia
webdunia
webdunia

ಮಧ್ಯರಾತ್ರಿ ಆ ದೇವಸ್ಥಾನದಲ್ಲಿ ಆಗಿದ್ದೇನು?

ಮಧ್ಯರಾತ್ರಿ ಆ ದೇವಸ್ಥಾನದಲ್ಲಿ ಆಗಿದ್ದೇನು?
ತುಮಕೂರು , ಶುಕ್ರವಾರ, 5 ಜುಲೈ 2019 (17:56 IST)
ಎಲ್ಲರೂ ಮಲಗಿರುವ ಸಂದರ್ಭದಲ್ಲಿ ಮಧ್ಯರಾತ್ರಿ ಆ ದೇವಾಲಯದಲ್ಲಿ ನಡೆಯಬಾರದ ಅನಾಹುತ ನಡೆದುಹೋಗಿದೆ.

ದೇವಸ್ಥಾನವೊಂದರಲ್ಲಿ ದೇವರನ್ನು ಬಿಡದೇ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ದೇವಾಲಯದ ಬಾಗಿಲದ ಬೀಗ ಒಡೆದು ನುಗ್ಗಿದ ಕಳ್ಳರು ದೇವರ ಮೈಮೇಲಿದ್ದ ತಾಳಿ, ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ.

ತುಮಕೂರು ಜಿಲ್ಲೆಯ ಹಿರೇತೊಟ್ಲುಕೆರೆ ಸೋಮೇಶ್ವರ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಮಧ್ಯರಾತ್ರಿ ದೇವಾಲಯದಲ್ಲಿ ನುಗ್ಗಿರುವ ಕಳ್ಳರು, ದೇವರ ಕೊರಳಲ್ಲಿದ್ದ 8 ಗ್ರಾಮ್ ಚಿನ್ನದ ತಾಳಿ ಸರ ಹಾಗೂ ಸೋಮೇಶ್ವರ ಉತ್ಸವ ಮೂರ್ತಿ ಮೈಮೇಲಿನ 5 ಬೆಳ್ಳಿಯ ಕರಡಿಗೆಗಳನ್ನು ಕಳ್ಳತನ ಮಾಡಿದ್ದಾರೆ.

ಕಾಣಿಕೆ ಪೆಟ್ಟಿಗೆಯನ್ನು ಒಡೆಯಲು ಯತ್ನಿಸಿ ವಿಫಲರಾಗಿದ್ದಾರೆ. ಪದೇ ಪದೇ ಕಳ್ಳತನ ಪ್ರಕರಣಗಳು ಮರುಕಳಿಸುತ್ತಿರುವುದರಿಂದ ಪೊಲೀಸ್ ಬೀಟ್ ಹೆಚ್ಚಿಸುವಂತೆ ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಳ್ಳನ ಎಟಿಎಂ ಕಾರ್ಡ್‌‌ನಿಂದ 2.5 ಲಕ್ಷ ಡ್ರಾ ಮಾಡಿದ ಮಹಿಳಾ ಪೊಲೀಸ್ ಇನ್ಸೆಪೆಕ್ಟರ್