Publish Date: Tue, 26 Nov 2019 (19:32 IST)
Updated Date: Tue, 26 Nov 2019 (19:34 IST)
ಪಾಪಿ ಪತಿ ಮಹಾಶಯನೊಬ್ಬ ತನ್ನ ಹೆಂಡತಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ಮಾಡಬಾರದ ಕೆಟ್ಟ ಕೆಲಸ ಮಾಡಿದ್ದಾನೆ.
ಪತ್ನಿ ವಸಂತ ಮೇಲೆ ಪತಿ ಮುರುಗೇಶ್ ಎಂಬಾತ ಪದೇ ಪದೇ ಅನುಮಾನ ಪಡುತ್ತಿದ್ದ. ಪತ್ನಿಯ ನಡತೆ ಹಾಗೂ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದನು.
ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ಮನೆ ಮಾಡಿಕೊಂಡಿದ್ದ ಈ ದಂಪತಿ ಬದುಕು ಅನುಮಾನಕ್ಕೆ ಬಲಿಯಾಗಿ ಹೋಗಿದೆ.
ಪತ್ನಿ ವಸಂತಳ ಜೊತೆ ಜಗಳವಾಡುತ್ತಿದ್ದಾಗ ಪತಿ ಮುರುಗೇಶ್ ಆಕೆಯನ್ನು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.