Select Your Language

Notifications

webdunia
webdunia
webdunia
webdunia

ಸಿಎಂಗೆ ನೀಡಿರೋ ಟಾಂಗ್ ಹೇಗಿದೆ?

ಸಿಎಂಗೆ ನೀಡಿರೋ ಟಾಂಗ್ ಹೇಗಿದೆ?
ಬೆಂಗಳೂರು , ಶುಕ್ರವಾರ, 15 ಮಾರ್ಚ್ 2019 (18:11 IST)
ಜೆಡಿಎಸ್‌ನಿಂದ ಯಾವುದೇ ಅಭ್ಯರ್ಥಿ ಸ್ಪರ್ಧಿಸಿದ್ರೂ ಗೆಲ್ಲಿಸೋ ಕೆಲಸ ಮಾಡ್ತೇವೆ. ಕೆಲವರು ಅಮೃತ ಕುಡಿದ್ರೂ ವಿಷ ಕುಡಿತಿದ್ದೀವಿ ಅಂತಾ ಹೇಳ್ತಾರೆ. ಆದ್ರೆ ನಾವು ವಿಷ ಕುಡಿದ್ರೂ ಅಮೃತ ಕುಡಿತೀವಿ ಅಂತಾನೇ ಹೇಳ್ತೀವಿ. ಹೀಗಂತ
ಪರೋಕ್ಷವಾಗಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಕೈ ಪಾಳೆಯದ ಮುಖಂಡ ಭರ್ಜರಿಯಾಗಿ ಟಾಂಗ್ ನೀಡಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರವನ್ನ ಜೆಡಿಎಸ್ ಗೆ ಬಿಟ್ಟಿರೋದ್ರಿಂದ ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ಬೀಳುತ್ತೆ. ಆದರೂ ಹೈಕಮಾಂಡ್ ಹೇಳಿರೋದ್ರಿಂದ ಶಿರಸಾವಹಿಸಿ ಕೆಲಸ ಮಾಡ್ತೀವಿ. ಹೈಕಮಾಂಡ್ ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ, ಎಐಸಿಸಿ ಆದೇಶ ಪಾಲಿಸುತ್ತೇವೆ. ಜೆಡಿಎಸ್‌ನಿಂದ ಯಾವುದೇ ಅಭ್ಯರ್ಥಿ ಸ್ಪರ್ಧಿಸಿದ್ರೂ ಗೆಲ್ಲಿಸೋ ಕೆಲಸ ಮಾಡ್ತೇವೆ. ಕೆಲವರು ಅಮೃತ ಕುಡಿದ್ರೂ ವಿಷ ಕುಡಿತಿದ್ದೀವಿ ಅಂತಾ ಹೇಳ್ತಾರೆ. ಆದ್ರೆ ನಾವು ವಿಷ ಕುಡಿದ್ರೂ ಅಮೃತ ಕುಡಿತೀವಿ ಅಂತಾನೇ ಹೇಳ್ತೀವಿ. ಹೀಗಂತ ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ ಕಾಂಗ್ರೆಸ್ ನ ಮುಖಂಡರಾದ ಎಸ್.ಟಿ. ಸೋಮಶೇಖರ್.

ಐದು ಕಾಂಗ್ರೆಸ್ ಶಾಸಕರಿದ್ದರೂ ಪರವಾಗಿಲ್ಲ ಜೆಡಿಎಸ್‌ ಪರವಾಗಿ ಕೆಲಸ ಮಾಡುತ್ತೇವೆ. ಸಚಿವ ಕೃಷ್ಣ ಬೈರೇಗೌಡ ಮನೆಯಲ್ಲಿ ಸಭೆ ಇದೆ. ಎಲ್ಲಾ ಶಾಸಕರು, ಸೋತ ಅಭ್ಯರ್ಥಿಗಳು, ಕಾಂಗ್ರೆಸ್ ಮುಖಂಡರು ಭಾಗಿಯಾಗ್ತಾರೆ. ಅಲ್ಲಿ ಚುನಾವಣೆ ರೂಪುರೇಷೆಗಳ ಬಗ್ಗೆ ಚರ್ಚಿಸುತ್ತೇವೆ ಎಂದರು.  



Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಅಭ್ಯರ್ಥಿ ನಿಲ್ಲಿಸುವಂತೆ ಭಜರಂಗಸೇನೆ ಬಿಎಸ್ ವೈಗೆ ಒತ್ತಾಯ