Select Your Language

Notifications

webdunia
webdunia
webdunia
webdunia

ಪ್ರೀತಿಸಿ ಸಂಸಾರ ಹೂಡಿದ ಪ್ರಿಯತಮಗೆ ಕೈಕೊಟ್ಟ ಯುವಕ, ದಿಕ್ಕು ತೋಚದ ಯುವತಿ ಗತಿಯೇನು?

ಪ್ರೀತಿಸಿ ಸಂಸಾರ ಹೂಡಿದ ಪ್ರಿಯತಮಗೆ ಕೈಕೊಟ್ಟ ಯುವಕ, ದಿಕ್ಕು ತೋಚದ ಯುವತಿ ಗತಿಯೇನು?
ಯಾದಗಿರಿ , ಮಂಗಳವಾರ, 19 ಡಿಸೆಂಬರ್ 2017 (15:41 IST)
ಒಂದು ವರ್ಷದಿಂದ ಪಕ್ಕದ ಮನೆಯ ಹುಡುಗಿಯನ್ನು ಪ್ರೀತಿಸಿ ಮದುವೆ ಮಾಡಿಕೊಳ್ಳುವುದಾಗಿ ಕರೆದುಕೊಂಡು ಹೋಗಿ ಒಂದು ತಿಂಗಳ ನಂತರ ಯುವಕ ಕೈಕೊಟ್ಟಿದ್ದು, ಇದರಿಂದ ಪ್ರೀತಿಸಿ ಮೋಸಹೋದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ.
 
ಶಹಾಪುರ ತಾಲೂಕಿನ ಹಾಲಗೇರಾ ಗ್ರಾಮದ ಭಾಗಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಷ ಸೇವಿಸಿ ತೀವ್ರ ಅಸ್ವಸ್ಥಳಾಗಿದ್ದ ಭಾಗ್ಯಮ್ಮಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
 
ಒಂದು ವರ್ಷ ಪ್ರೀತಿಸಿ ಒಂದು ತಿಂಗಳು ಸುತ್ತಾಡಿ ಮದುವೆಯಾಗಲು ನಿರಾಕರಿಸಿದ್ದಕ್ಕೆ ಮನನೊಂದು ಯುವತಿಯೊಬ್ಬಳು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ 
 
ವಡಗೇರಾ ಗ್ರಾಮದ ನಾಗರಾಜು ಎಂಬಾತ ಹಾಲಗೇರೆಯ ತನ್ನ ಸಂಬಂಧಿಕರ ಮನೆಯಲ್ಲಿ ವಾಸವಿದ್ದು, ಪಕ್ಕದ ಮನೆಯ ಭಾಗಮ್ಮಳನ್ನು ಒಂದು ವರ್ಷದಿಂದ ಪ್ರೀತಿಸುತ್ತಿದ್ದ. ಪೋಷಕರು ಪ್ರಿತಿಯ ವಿಚಾರ ತಿಳಿಯದೆ ಬೇರೆ ಹುಡುಗನ ಜೊತೆ ಮದುವೆಯ ನಿಶ್ಚಿತಾರ್ಥ ನಡೆಸಿದ್ದಾರೆ.
 
ಈ ವಿಚಾರ ತಿಳಿದ ನಾಗರಾಜು ಭಾಗಮ್ಮಳನ್ನು ಯಾರಿಗೂ ತಿಳಿಯದಂತೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿ ಒಂದು ತಿಂಗಳು ಸಂಸಾರ ನಡೆಸಿದ್ದಾನೆ. ನಂತರ ನನಗೆ ನೀನು ಇಷ್ಟ ಇಲ್ಲ, ಎಲ್ಲಾದರೂ ಹೋಗು ಎಂದು ಅರ್ಧದಲ್ಲಿಯೇ ಕೈ ಕೊಟ್ಟು ಪರಾರಿಯಾಗಿದ್ದಾನೆ. ಪೋಷಕರಿಗೆ ವಿಚಾರ ತಿಳಿಸಿ ಯುವತಿ ಊರಿಗೆ ಬಂದ ನಂತರ ವಡಗೇರಾ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪೊಲೀಸರು ಸಂಧಾನ ನಡೆಸಲು ಪ್ರಯತ್ನಿಸಿದ್ದರು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ8 (2018), ಎ8 + (2018) ವೈಶಿಷ್ಟ್ಯತೆಗಳು