Publish Date: Sat, 12 Sep 2020 (18:35 IST)
Updated Date: Sat, 12 Sep 2020 (18:36 IST)
ಗ್ರಾಮ ದೇವತೆಯ ದೇವಸ್ಥಾನದಲ್ಲಿ ನಡೆಯಬಾರದ ಘಟನೆ ನಡೆದುಹೋಗಿದೆ.
ದೇವರ ಮೇಲಿನ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹೆಸರೂರು ಗ್ರಾಮದಲ್ಲಿ ನಡೆದಿದೆ.
ಬೆಳ್ಳಿ ಕಿರೀಟ, ಬಂಗಾರ ಮೂಗುತಿ ಸೇರಿದಂತೆ ಅನೇಕ ವಸ್ತುಗಳನ್ನು ಎಸ್ಕೇಪ್ ಮಾಡಿದ್ದಾರೆ. ಅಷ್ಟೇ ಅಲ್ಲ ಹುಂಡಿಯಲ್ಲಿದ್ದ ಹಣ ಕೂಡಾ ಕಳ್ಳತನ ಮಾಡಿದ್ದಾರೆ.
ಭಯ, ಭಕ್ತಿಗೆ ಹೆಸರಾದ ಗ್ರಾಮದೇವತೆಯ ಆಭರಣಗಳನ್ನು ಬಿಡದ ಕಳ್ಳರಿಗಾಗಿ ಮುಂಡರಗಿ ಪೊಲೀಸರು ಬಲೆ ಬೀಸಿದ್ದಾರೆ.
ಈ ಕುರಿತು ಗದಗ ಜಿಲ್ಲೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.