Webdunia - Bharat's app for daily news and videos

Install App

ಜೀವದ ಹಂಗು ತೊರೆದ ಇವ್ರು ಮಾಡ್ತಿರೋದೇನು? ಶಾಕಿಂಗ್

Webdunia
ಸೋಮವಾರ, 6 ಮೇ 2019 (15:41 IST)
ಜೀವದ ಹಂಗು ತೊರೆದು ಯುವಕರು, ಮಹಿಳೆಯರು ಮಾಡುತ್ತಿರುವ ಕೆಲಸ ನೋಡಿದ್ರೆ ಎಂಥವರೂ ಒಂದು ಕ್ಷಣ ಗಾಬರಿಯಾಗಲೇಬೇಕು.

ಗುಟುಕು ನೀರಿಗಾಗಿ ಜೀವದ ಹಂಗು ತೊರೆದು ಬಾವಿಯಿಂದ ನೀರು ಸೇದುತ್ತಿದ್ದಾರೆ ಇಲ್ಲಿನ ಜನರು. ಬೀದರ್‌ ಜಿಲ್ಲೆ ಔರಾದ್ ತಾಲೂಕಿನ ಚಿಮ್ಮೆಗಾಂವ್ ಗ್ರಾಮದಲ್ಲಿನ ಜನರ ಪ್ರತಿದಿನದ ನರಕಯಾತನೆಯ ಸ್ಟೋರಿ ಇದು.  70 ರಿಂದ 80 ಕುಟುಂಬಗಳು ವಾಸವಾಗಿರುವ ಈ ಗ್ರಾಮದಲ್ಲಿ ಜಾನುವಾರಗಳು ಸೇರಿದಂತೆ ಮನುಷ್ಯ ಕುಲಕ್ಕೆ ನೀರಿನ ದಾಹ ತಣಿಸಲು ಇರುವುದು ಒಂದೇ ಬಾವಿ.

ಈ ಬಾವಿಯಿಂದ ಪ್ರತಿದಿನ ಒಂದು ಕೊಡ ನೀರಿಗಾಗಿ ಗ್ರಾಮಸ್ಥರು ಕಿತ್ತಾಡುವಂತಾಗಿದೆ. ಬಾವಿ ಮೇಲೆ ನಿಂತು ಜೀವದ ಹಂಗು ತೊರೆದು 50 ಅಡಿ ಆಳದ ಬಾವಿಯಿಂದ ನೀರು ಸೇದುತ್ತಿದ್ರೆ ಯಮನ ಲೋಕ ತಲುಪೋದು ಗ್ಯಾರೆಂಟಿ ಎನ್ನುವ ಭಯ ಗ್ರಾಮಸ್ಥರದ್ದಾಗಿದೆ.

ಭೀಕರ ಬರಗಾಲ ಎದುರಾದರೂ  ಗ್ರಾಮಸ್ಥರಿಗೆ ನೀರು ಕೊಡಲು ಜಿಲ್ಲಾಡಳಿತ ವಿಫಲವಾಗಿದೆ ಎಂದು ಜನರು ದೂರುತ್ತಿದ್ದಾರೆ.



 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments