Webdunia - Bharat's app for daily news and videos

Install App

ಅಂಬರೀಶ್ ಸಾವಿಗೂ ಮುನ್ನ ಆ ಕೊನೆಯ ಕ್ಷಣದಲ್ಲಿ ಏನಾಗಿತ್ತು ಗೊತ್ತಾ?

Webdunia
ಮಂಗಳವಾರ, 27 ನವೆಂಬರ್ 2018 (10:03 IST)
ಬೆಂಗಳೂರು: ಶನಿವಾರ ರಾತ್ರಿ ನಮ್ಮನ್ನು ಅಗಲಿದ ಹಿರಿಯ ನಟ ಅಂಬರೀಶ್ ಸಾವಿನ ಕೆಲವೇ ಕ್ಷಣಗಳ ಮೊದಲು ಹೇಗಿದ್ದರು ಎಂಬ ಸಂಗತಿಯನ್ನು ಅವರ ಆಪ್ತರೊಬ್ಬರು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.

ಅಂಬರೀಶ್ ಶನಿವಾರ ರಾತ್ರಿ ಊಟ ಮುಗಿಸಿ ಸ್ವಲ್ಪ ಹೊತ್ತು ಟಿವಿ ನೋಡುತ್ತಾ ಕುಳಿತಿದ್ದರಂತೆ. ಆ ಸಂದರ್ಭದಲ್ಲಿ ಟಿವಿಯಲ್ಲಿ ಅಂದು ಮಂಡ್ಯದಲ್ಲಿ ನಡೆದಿದ್ದ ಬಸ್ ದುರಂತದ ಬಗ್ಗೆ ಸುದ್ದಿ ಪ್ರಸಾರವಾಗುತ್ತಿತ್ತು.

ಅದನ್ನು ನೋಡಿ ವಿಚಲಿತರಾಗಿದ್ದರೋ ಏನೋ, ಆಗಾಗ ಚಾನೆಲ್ ಬದಲಾಯಿಸುತ್ತಾ ಕೂತಿದ್ದವರು, ಸಾಕು ಇನ್ನು ಮಲಗುತ್ತೇನೆ ಎಂದು ತಮ್ಮ ಕೊಠಡಿಗೆ ತೆರಳಿದ್ದರು. ಕೆಲವೇ ಕ್ಷಣಗಳ ನಂತರ ವಿಪರೀತ ಎದೆ, ಬೆನ್ನು ನೋಯುತ್ತಿದೆ ಎಂದು ಜೋರಾಗಿ ಕೂಗಿಕೊಂಡರಂತೆ.

ಅಂಬಿ ಕೂಗಿದ ಸದ್ದಿಗೆ ಅವರ ಕೇರ್ ಟೇಕರ್ ಗಳು ಓಡಿ ಹೋಗಿ ಅವರ ಬೆನ್ನು, ಕುತ್ತಿಗೆ ಮಸಾಜ್ ಮಾಡಿ ಕೃತಕ ಉಸಿರಾಟ ಅಳವಡಿಸಿದ್ದರಂತೆ. ನಂತರ ವೀಲ್ ಚೇರ್ ನಲ್ಲಿ ಕೂರಿಸಿಕೊಂಡು ಲಿಫ್ಟ್ ಮೂಲಕ ಅವರನ್ನು ಕೆಳಗೆ ಕಾರಿನ ಬಳಿ ತರುವಷ್ಟರಲ್ಲೇ ಅಂಬಿ ಉಸಿರಾಟ ನಿಲ್ಲಿಸಿದ್ದರು. ಅವರ ಮೈ ತಣ್ಣಗಾಗಿತ್ತು, ಎದೆ ಬಡಿತವೂ ನಿಂತಿತ್ತು ಎಂದು ಆಪ್ತರು ವಿವರಿಸಿದ್ದಾರೆ. ಇದೆಲ್ಲಾ ಕೇವಲ ಅರ್ಧಗಂಟೆಯೊಳಗೆ ನಡೆದು ಹೋಗಿತ್ತು. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಅಂಬಿ ಇಹಲೋಕ ತ್ಯಜಿಸಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಡುರಸ್ತೆಗೆ ನುಗ್ಗಿ ಕಬ್ಬಿಗಾಗಿ ಲಾರಿ ಮೇಲೆ ದಾಳಿ ಮಾಡಿದ ಒಂಟಿ ಸಲಗ

ಇಂಡಿಯಾ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ಅಮಿತ್ ಶಾ ಗಂಭೀರ ಆರೋಪ

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಪತ್ರ ವದಂತಿ: ಸಿಎಂ ರಿಯ್ಯಾಕ್ಷನ್ ಹೀಗಿತ್ತು

ಆನ್‌ಲೈನ್‌ ಬೆಟ್ಟಿಂಗ್, ಆಸ್ತಿ ಗಳಿಕೆ ಆರೋಪ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ವಶಕ್ಕೆ

ಮುಂಬೈನಿಂದ ಜೋಧಪುರಕ್ಕೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ರನ್‌ ವೇಯಲ್ಲೇ ನಿಲ್ಲಿಸಿದ್ಯಾಕೆ

ಮುಂದಿನ ಸುದ್ದಿ
Show comments