Webdunia - Bharat's app for daily news and videos

Install App

ಮೂರು ಜೋಡಿಗಳು ಮದುವೆಯಾದ ತಕ್ಷಣ ಮಾಡಿದ್ದೇನು?

Webdunia
ಸೋಮವಾರ, 20 ಮೇ 2019 (13:23 IST)
ಮದುವೆಯಾದ ತಕ್ಷಣವೇ ವರನೊಬ್ಬ ಇಂತಹ ಕೆಲಸ ಮಾಡಿ ಮದುವೆಗೆ ಬಂದವರಿಗೆ ಹಾಗೂ ಜನರ ಗಮನ ಸೆಳೆದಿದ್ದಾರೆ. 

ರವಿವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಮಶೆಟ್ಟಿ-ನಾಗವೇಣಿ ಹಾಗೂ ವೀರಣ್ಣ-ಲಕ್ಷ್ಮೀ ಎಂಬ ಎರಡು ನವ ದಂಪತಿಗಳು ಮದುವೆ ಛತ್ರದಿಂದ ನೇರವಾಗಿ ರಟಕಲ್ ಗ್ರಾಮದಲ್ಲಿನ ಮತಗಟ್ಟೆಗೆ ತೆರಳಿದ್ದಾರೆ.

ತಮ್ಮ ಮತ ಚಲಾಯಿಸುವ ಮೂಲಕ ಮತದಾನದ ಮಹತ್ವ ಸಾರಿದರು. ಅದೇ ರೀತಿ ಚಿಂಚೋಳಿ ಕ್ಷೇತ್ರದ ಚಿಮ್ಮ ಇದಲಾಯಿ ಗ್ರಾಮದಲ್ಲಿ ವೀರಭದ್ರಪ್ಪ ಮತ್ತು ಸಪ್ನ ಅವರು ನವಬಾಳಿಗೆ ಹೆಜ್ಜೆಯಿಟ್ಟರು.

ಮದುವೆಯಾದ ಬಳಿಕ ನೇರವಾಗಿ ಮತಗಟ್ಟೆಗೆ ಆಗಮಿಸಿದ ಮಧುಮಗ ವೀರಭದ್ರಪ್ಪ ಅವರು ತಮ್ಮ ಅಮೂಲ್ಯವಾದ ಮತ ಚಲಾಯಿಸಿದರು. ಚಿಂಚೋಳಿ ವಿಧಾನ ಸಭೆಯ ಉಪಚುನಾವಣೆಯಲ್ಲಿ ಒಟ್ಟು ಮೂರು ಜೋಡಿಗಳು ಮದುವೆ ದಿನವೇ ಮತ ಚಲಾಯಿಸಿ ಮಾದರಿಯಾದರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments