Select Your Language

Notifications

webdunia
webdunia
webdunia
webdunia

ಹಣ್ಣು ನೀಡಿದ ಯುವಕನಿಗೆ ಆನೆ ಮಾಡಿದ್ದೇನು? ಶಾಕಿಂಗ್!

ಹಣ್ಣು ನೀಡಿದ ಯುವಕನಿಗೆ ಆನೆ ಮಾಡಿದ್ದೇನು? ಶಾಕಿಂಗ್!
ತುಮಕೂರು , ಭಾನುವಾರ, 17 ಫೆಬ್ರವರಿ 2019 (12:07 IST)
ಆ ಯುವಕ ಆನೆಗೆ ಬಾಳೆಹಣ್ಣನ್ನು ನೀಡಿದೆ. ಆದರೆ ಹಣ್ಣು ತಿನ್ನಬೇಕಿದ್ದ ಆನೆ ಆ ಯುವಕನ ತಲೆಗೆ ಬಾಯಿ ಹಾಕಿ ಬಿಸಾಡಿದೆ.

ಪ್ರಭಾಸ್ ಸರ್ಕಸ್ಕಂಪನಿ ಸಾಕಿರುವ ಮದವೇರಿದ್ದ ಆನೆಗೆ ತಿನ್ನಲು ಬಾಳೆಹಣ್ಣು ನೀಡಿದ ಯುವಕನ ತಲೆಯನ್ನೆ ಜಗಿದು ಸೊಂಡಿಲಿನಿಂದ ಎಸೆದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ತುಮಕೂರು ತಾಲ್ಲೂಕಿನ ಕೋರಾ ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಬಳಿ ನಡೆದಿದೆ.

ಪ್ರತಾಪ್ (20) ಎಂಬಾತನೇ ತೀವ್ರವಾಗಿ ಗಾಯಗೊಂಡಿರುವ ಯುವಕ. ಕೋರಾ ಆಂಜನೇಯಸ್ವಾಮಿ ದೇವಾಲಯದ ಬಳಿ ಪ್ರಭಾಸ್ ಸರ್ಕಸ್ನವರು ಸಾಕಿದ್ದ ಆನೆಗೆ ಮದವೇರಿದ್ದು ಆನೆಗೆ ಯುವಕ ಪ್ರತಾಪ್ ತಿನ್ನಲು ಬಾಳೆಹಣ್ಣು ನೀಡಿದ್ದಾನೆ.

ಮದ ತುಂಬಿದ್ದ ಸಾಕಾನೆ ಸೊಂಡಿಲಿನಿಂದ ಬಾಳೆಹಣ್ಣಿನೊಂದಿಗೆ ಯುವಕನ ತಲೆಗೂ ಬಾಯಿ ಹಾಕಿ ಜಗಿದಿದೆ. ನಂತರ ಸೊಂಡಿಲಿನಿಂದ ಯುವಕನನ್ನು ದೂರಕ್ಕೆ ಎಸೆದಿದೆ. ತಕ್ಷಣ ಗಂಭೀರ ಸ್ಥಿತಿಯಲ್ಲಿದ್ದ ಯುವಕನನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನ್ ಮುರ್ದಾಬಾದ್ ಎಂದು ಆಕ್ರೋಶ