Select Your Language

Notifications

webdunia
webdunia
webdunia
webdunia

ಶ್ರೀರಾಮನ ಕುರಿತ ಭಗವಾನ್ ಹೇಳಿಕೆಗೆ ಡಾ.ವಿರೇಂದ್ರ ಹೆಗ್ಗಡೆ ಹೇಳಿದ್ದೇನು?

ಶ್ರೀರಾಮನ ಕುರಿತ ಭಗವಾನ್ ಹೇಳಿಕೆಗೆ ಡಾ.ವಿರೇಂದ್ರ ಹೆಗ್ಗಡೆ ಹೇಳಿದ್ದೇನು?
ಮಂಗಳೂರು , ಬುಧವಾರ, 2 ಜನವರಿ 2019 (14:13 IST)
ಶ್ರೀರಾಮನ ಕುರಿತು ಪ್ರೊ. ಕೆ.ಎಸ್.ಭಗವಾನ್ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ತೀಕ್ಷ್ಣ ಮಾತಿನಲ್ಲಿ ಕುಟುಕಿದ್ದಾರೆ.

ಪ್ರೊ. ಭಗವಾನ್ ರಾಮನನ್ನ ನಿಂದಿಸಿ ನಿಂದಾಸ್ತುತಿ ಮಾಡಿದ್ದಾರೆ. ರಾಮನನ್ನ ನಿಂದಿಸಿ ಬೇಗ ಮೋಕ್ಷ ಪಡೆಯಲು ನಿರ್ಧರಿಸಿದ್ದಾರೇನೋ..? ಎಂದಿದ್ದಾರೆ.

ಜಯ ವಿಜಯರು ಶತ್ರುತ್ವದಿಂದ ಮೂರು ಜನ್ಮದಲ್ಲಿ ಮೋಕ್ಷಪಡೆದು ಭಗವಂತನ ಸಾನಿಧ್ಯ ಸೇರಿದ್ದರು. ಭಗವಾನರು ಮೂರೇ ಜನ್ಮದಲ್ಲಿ ಮೋಕ್ಷ ಪಡೆಯುವ ಆಸೆಯಲ್ಲಿ ಇರಬಹುದೇನೋ..? ಎಂದಿದ್ದಾರೆ.

ನಾವು ಮಾತ್ರ ಶ್ರೀರಾಮನನ್ನ ಜಪಿಸಿ ಏಳು ಜನ್ಮದಲ್ಲಿ ಹಾಗೇ ಇರುತ್ತೇವೆ ಎಂದು ಧರ್ಮಸ್ಥಳದಲ್ಲಿ ಡಾ. ವಿರೇಂದ್ರ ಹೆಗ್ಗಡೆ ಹೇಳಿಕೆ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ಧಗಂಗಾ ಶ್ರೀ ಭೇಟಿ ಮಾಡಿದ ರಾಜ್ಯಸಭಾ ಸದಸ್ಯ!